ಜಮೀನು ದಾನ ಕೊಡ್ತೀನಿ, ತಾಕತ್ ಇದ್ರೆ ರಾಮಮಂದಿರ ಕಟ್ಟಿಸಿ: ಸಿದ್ದರಾಮಯ್ಯಗೆ ಸವಾಲ್ ಹಾಕಿದ ರೈತ | Janata news
ಬಾಗಲಕೋಟೆ : ಅಯೋಧ್ಯೆಯಲ್ಲಿನ ವಿವಾದಿತ ಜಾಗ ಬಿಟ್ಟು ಬೇರೆ ಎಲ್ಲಿಯಾದರೂ ರಾಮ ಮಂದಿರ ನಿರ್ಮಾಣ ಮಾಡುವುದಿದ್ದರೆ ನಾನು ದೇಣಿಗೆ ಕೊಡುತ್ತೇನೆ ಎಂದಿದ್ದ ಸಿದ್ದರಾಮಯ್ಯ, ನಾನೂ ನನ್ನ ಹುಟ್ಟೂರಿನಲ್ಲೂ ರಾಮ ಮಂದಿರ ಕಟ್ಟಿಸುತ್ತಿದ್ದೇನೆ ಎಂದಿದ್ದರು.
ಬಾದಾಮಿಯ ಮತದಾರ ಬಾಸವರಾಜ ಗೊರಕೊಪ್ಪ, ಒಂದು ಕೋಟಿ ರೂ ಬೆಲೆಬಾಳುವ ನನ್ನ ಒಂದು ಎಕರೆ ಜಮೀನನ್ನು ರಾಮಮಂದಿರ ನಿರ್ಮಾಣಕ್ಕಾಗಿ ದಾನ ಕೊಡುತ್ತೇನೆ. ತಾಕತ್ತು ಇದ್ರೇ ಸಿದ್ದರಾಮಯ್ಯ ಸ್ವಂತ ಹಣದಿಂದ ಆ ಜಾಗದಲ್ಲಿ ರಾಮಮಂದಿರ ಕಟ್ಟಿಸಲಿ ಎಂಬುದಾಗಿ ಸವಾಲ್ ಹಾಕಿದ್ದಾರೆ.
ಬಾದಾಮಿ ಪುರಸಭೆ ಸದಸ್ಯರೂ ಆದ ರೈತ ಬಸವರಾಜ ಗೊರಕೊಪ್ಪ ಮಾತನಾಡಿ, ಸುಪ್ರೀಂ ಕೋರ್ಟ್ ಅಯೋಧ್ಯೆಯ ಜಾಗ ಇತ್ಯರ್ಥ ಮಾಡಿದೆ. ಆದರೂ ಸಿದ್ದರಾಮಯ್ಯ ಅದು ವಿವಾದಿತ ಜಾಗ. ಅಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡೋದಿಲ್ಲ ಅಂತಾರೆ. ಹಾಗಾದರೆ ಅವರಿಗೆ ಸವಾಲು ಹಾಕುತ್ತೇನೆ. ಎಂಬತ್ತರಿಂದ ಒಂದು ಕೋಟಿ ರೂ. ಬೆಲೆ ಬಾಳುವ ನನ್ನ ಒಂದು ಎಕರೆ ಜಮೀನನ್ನು ದಾನ ಮಾಡುತ್ತೇನೆ. ಆ ಜಾಗದಲ್ಲಿ ಸಿದ್ದರಾಮಯ್ಯ ರಾಮ ಮಂದಿರ ಕಟ್ಟಿಸಲಿ ಎಂದು ಸವಾಲ್ ಹಾಕಿದ್ದಾರೆ.