ತೈಲ ಬೆಲೆ ನಿರ್ಧಾರ ನಮ್ಮ ನಿಯಂತ್ರಣದಲ್ಲಿ ಇಲ್ಲ, ಲಾರಿ ಮುಷ್ಕರ ಕೈಬಿಡಿ: ಈಶ್ವರಪ್ಪ ಮನವಿ | Janata news
ಶಿವಮೊಗ್ಗ : ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ, ತೈಲ ಬೆಲೆ ಏರಿಕೆ ಅಥವಾ ಇಳಿಕೆ ನಮ್ಮ ಕೈನಲ್ಲಿ ಇಲ್ಲ, ನೀವು ಕೊಟ್ಟ ಮನವಿಗಳನ್ನ ಕೇಂದ್ರ ಸರ್ಕಾರ ಪರಿಗಣಿಸಿ ಎಷ್ಟು ಸಾಧ್ಯವೋ ಅಷ್ಟು ಬೆಲೆ ಇಳಿಕೆ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದರು.
ಲಾರಿ ಮುಷ್ಕರವನ್ನ ಸಾಮಾನ್ಯ ಜನರ ಹಿತದೃಷ್ಟಿಯಿಂದ ಕೈಬಿಡುವಂತೆ ಮನವಿ ಮಾಡಿದ ಸಚಿವರು, ಲಾರಿ ಮಾಲೀಕರಿಗಷ್ಟೇ ಸಂಕಷ್ಟವಾಗಿಲ್ಲ, ಈ ಮುಷ್ಕರ ಮುಂದುವರಿದರೆ ಕೂಲಿ ಕಾರ್ಮಿಕರು, ಲಾರಿ ಚಾಲಕರು ಹಾಗೂ ರೈತರ ಮೇಲೂ ಪರಿಣಾಮ ಬೀರುತ್ತದೆ ಎಂದರು.
ಮುಷ್ಕರದಿಂದ ಕೈಗಾರಿಕೆ ಸೇರಿ ಎಲ್ಲಾ ಕ್ಷೇತ್ರಕ್ಕೂ ಸಮಸ್ಯೆಯಾಗುತ್ತದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಲಿದೆ. ಮುಷ್ಕರವೇ ಎಲ್ಲದಕ್ಕೂ ಪರಿಹಾರವಲ್ಲ, ದಯವಿಟ್ಟು ಮುಷ್ಕರ ವಾಪಸ್ ಪಡೆಯಿರಿ ಎಂದು ಈಶ್ವರಪ್ಪ ಮನವಿ ಮಾಡಿದರು.
RELATED TOPICS:
English summary :Eshwarappa