ವಿದ್ಯಾರ್ಥಿಗಳ ಪಾಸ್ ಹೊರೆ ಇಳಿಸಿ: ಶಿಕ್ಷಣ ಸಚಿವರ ಸೂಚನೆ | Janata news
ಬೆಂಗಳೂರು : ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ಪಡೆಯಲು ಎದುರಾಗಿರುವ ತೊಂದರೆ ನಿವಾರಿಸಿ, ಸಕಾಲದಲ್ಲಿ ಬಸ್ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಬಸ್ ಪಾಸ್ ಪಡೆಯುವುದಕ್ಕೆ ಇರುವ ತೊಂದರೆ ಬಗ್ಗೆ ಸಕಾಲ ಮತ್ತು ಸೇವಾ ಸಿಂಧು ಅಧಿಕಾರಿಗಳು ಹಾಗೂ ಸಾರಿಗೆ ಸಂಸ್ಥೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು , ಶೈಕ್ಷಣಿಕ ವರ್ಷ ತಡವಾಗಿದೆ. ಶಾಲೆಗೆ ಬರುವುದು ಕಡ್ಡಾಯವಲ್ಲವೆಂದರೂ ಹೆಚ್ಚಿನ ಹಾಜರಾತಿ ದಾಖಲಾಗುತ್ತಿದೆ. ಪಾಸ್ ದೊರೆಯದೆ ಸಮಸ್ಯೆಯಿಂದ ತರಗತಿಗೆ ಗೈರು ಹಾಜರಾದವರೂ ಹೆಚ್ಚಿದ್ದಾರೆ. ಇಲಾಖೆಗಳ ಮುಖ್ಯಸ್ಥರು ಗಮನಹರಿಸಬೇಕು ಎಂದು ಸಚಿವರು ಸೂಚಿಸಿದರು.
RELATED TOPICS:
English summary :Suresh Kumar