ಕಾಶ್ಮೀರಿ ಪಂಡಿತರ ಧ್ವನಿ ಧಮನಕ್ಕೆ ಸುಪಾರಿ ನೀಡಿದ ಐಎಸ್ಐ, ಖಲಿಸ್ತಾನಿ | Janata news
ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ಪ್ರಮುಖ ಕಾರ್ಯಚರಣೆಯಲ್ಲಿ ದೆಹಲಿ ಪೊಲೀಸರು ಪ್ರಮುಖ ಹತ್ಯೆಯ ಯೋಜನೆಯನ್ನು ತಪ್ಪಿಸಿದ್ದಾರೆ. ದೆಹಲಿಯ ಆರ್.ಕೆ.ಪುರಂ ಬಳಿ ದೆಹಲಿ ಪೊಲೀಸರು ಇಬ್ಬರು ಅಪರಾಧಿಗಳನ್ನು ಬಂಧಿಸಿದ್ದಾರೆ. ನವದೆಹಲಿಯ ಕಾಶ್ಮೀರಿ ಕಾರ್ಯಕರ್ತರನ್ನು ಗುರಿಯಾಗಿಸುವ ವಿದೇಶದಲ್ಲಿ ಯೋಜಿಸಿದ ಸಂಚುಗಳ ಕುರಿತು ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಈ ಪಂಜಾಬ್ ಭೂಗತಪಾತಕಿಗಳಿಗೆ ಹತ್ಯೆಯ ಗುತ್ತಿಗೆ ನೀಡಲಾಗಿತ್ತು, ಎಂದು ಮೂಲಗಳಿಂದ ತಿಳಿದುಬಂದಿದೆ
ದೆಹಲಿ ಪೊಲೀಸರು ಬಂಧಿಸಿರುವ ಇವರಿಬ್ಬರಿಗೂ, ಕಾಶ್ಮೀರಿ ಪಂಡಿತ್ ಕಾರ್ಯಕರ್ತ ಸುಶೀಲ್ ಪಂಡಿತ್ ಅವರನ್ನು, ಗುರಿಯಾಗಿಸಲು ಗುತ್ತಿಗೆ ನೀಡಲಾಗಿತ್ತು. ಸುಶೀಲ್ ಪಂಡಿತ್ ಅವರನ್ನು ಕೊಲ್ಲಲು ಅವರಿಗೆ ರೂ.10 ಲಕ್ಷ ನೀಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಪಂಡಿತ್ ಅವರ ಫೋಟೋ ಪಾತಕಿಗಳ ಫೋನ್ನಲ್ಲಿ ಕಂಡುಬಂದಿದೆ, ಎನ್ನಲಾಗಿದೆ.
ಬಂಧಿತರ ಬಳಿಯಿಂದ ಎರಡು ಅರೆ-ಸ್ವಯಂಚಾಲಿತ ಪಿಸ್ತೂಲ್ಗಳು ಮತ್ತು ನಾಲ್ಕು ಲೈವ್ ಕಾರ್ಟ್ರಿಜ್ ಗಳು ವಶಕ್ಕೆ ಪಡೆಯಲಾಗಿದೆ. ದೆಹಲಿ ಪೊಲೀಸ್ ವಿಶೇಷ ಕೋಶ ಮತ್ತು ಸ್ಥಳೀಯ ಪ್ರದೇಶ ಪೊಲೀಸರ ಜಂಟಿ ತಂಡದಿಂದ ಆರೋಪಿಗಳ ವಿಚಾರಣೆ ನಡೆಯುತ್ತಿದೆ, ಎನ್ನಲಾಗಿದೆ.
ಕಾಶ್ಮೀರಿ ಪಂಡಿತರ ಧ್ವನಿಯನ್ನು ಮುಚ್ಚಿ ಹಾಕಲು ಐಎಸ್ಐ ಮತ್ತು ಖಲಿಸ್ತಾನಿ ಸಂಘಟನೆಗಳು ಪಂಜಾಬಿ ಭೂಗತಪಾತಕಿಗಳನ್ನು ಬಳಸುವ ಗಂಭೀರ ಯೋಜನೆ ಇದೀಗ ಬೆಳಕಿಗೆ ಬಂದಂತಾಗಿದೆ.