ಸಾರ್ವಜನಿಕರ ಪ್ರವೇಶ ನಿಷೇಧಿತ ಕೆಆರ್ಎಸ್ ಹಿನ್ನೀರಿನಲ್ಲಿ ಪೊಲೀಸರಿಂದ ಮೋಜು,ಮಸ್ತಿ, ಭರ್ಜರಿ ಪಾರ್ಟಿ! | Janata news
ಮಂಡ್ಯ: : ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಸದಸ್ಯರು ತಮ್ಮ ಕುಟುಂಬದೊಂದಿಗೆ ಜಲಾಶಯದ ಹಿನ್ನೀರಿನಲ್ಲಿ ಮೋಜು-ಮಸ್ತಿ ಮಾಡಿರುವುದು ಟೀಕೆಗೆ ಗುರಿಯಾಗಿದೆ.
ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಸದಸ್ಯರು ತಮ್ಮ ಕುಟುಂಬದವರೊಂದಿಗೆ ಹಿನ್ನೀರಿಗೆ ಬಂದು ಸಖತ್ ಮೋಜು, ಮಸ್ತಿ, ಪಾರ್ಟಿ ಮಾಡಿರುವ ಘಟನೆ, ಈಗ ಬೆಳಕಿಗೆ ಬಂದಿದೆ.
ಕೆಆರ್ಎಸ್ ಹಿನ್ನೀರಿನಲ್ಲಿ ಸಾರ್ವಜನಿಕರಿಗೆ ನಿಷೇಧವಿದೆ. ಆದ್ರೆ ಮೈಸೂರಿನ ಪೊಲೀಸ್ ಅಕಾಡೆಮಿಯ ಸಿಬ್ಬಂದಿ ಮಾತ್ರ ಪಿಕ್ನಿಕ್ ನೆಪದಲ್ಲಿ ತಮ್ಮ ಕುಟುಂಬದವರ ಜತೆ ಸೇರಿ ಡಿಜೆ ಹಾಕಿಕೊಂಡು ಮೋಜು ಮಸ್ತಿ ನಡೆಸುತ್ತಿದ್ದಾರೆ. ಇದರಿಂದ ಅಧಿಕಾರಿಗಳಿಗೆ ಒಂದು ನ್ಯಾಯ, ಸಾಮಾನ್ಯರಿಗೆ ಒಂದು ನ್ಯಾಯನಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಡ್ಯಾಂನ ಉತ್ತರ ಪ್ರವೇಶದ್ವಾರದ ಹಿನ್ನೀರಿನಲ್ಲಿ ಮತ್ತು ನೀರಿನಿಂದ ಸುಮಾರು 200 ಮೀ. ದೂರದಲ್ಲಿಯೇ ಶಾಮಿಯಾನ ಹಾಕಿಕೊಂಡು ಭೋಜನಕೂಟ, ಕ್ವಿಜ್, ಆಟೋಟ ಸ್ಪರ್ಧೆ ಮಾಡಲಾಗಿದೆ. 120ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದಾರೆ.
ಸಾಮಾನ್ಯವಾಗಿ ಡ್ಯಾಂ ಹಿನ್ನೀರಿನಲ್ಲಿ ಪಾರ್ಟಿ ಮಾಡುವುದು ಇರಲಿ, ನಡೆದಾಡುವುದಕ್ಕೂ ಅವಕಾಶವಿಲ್ಲ. ಸಾಮಾನ್ಯರಿಗೆ ಒಂದು ನ್ಯಾಯ, ಅಧಿಕಾರಿಗಳಿಗೆ ಒಂದು ನ್ಯಾಯವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.