ಮಹಿಳಾ ದಿನಾಚರಣೆಯಂದೇ ಕಂದಮ್ಮನನ್ನು ಕೊಂದು ತಾಯಿ ನೇಣಿಗೆ ಶರಣು | Janata news
ಚಿಕ್ಕಬಳ್ಳಾಪುರ : ಮಹಿಳಾ ದಿನಾಚರಣೆಯಂದೇ ಮಗಳನ್ನು ಕೊಂದು ತಾಯಿಯೊಬ್ಬಳು ನೇಣಿಗೆ ಶರಣಾಗಿರುವ ಮನಕಲುಕುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಊದುತಿ ಗ್ರಾಮದಲ್ಲಿ ಸಂಭವಿಸಿದೆ.
ತನ್ನ 2 ವರ್ಷದ ಪುಟ್ಟ ಮಗಳು ಮನುಜಾಳನ್ನು ಕೊಂದ ಆಕೆಯ ತಾಯಿ ರಾಧಾ(28) ನಂತರ ನೇಣಿಗೆ ಶರಣಾಗಿದ್ದಾಳೆ. ಮೂಲತಃ ಗೌರಿಬಿದನೂರು ತಾಲ್ಲೂಕಿನ ಸೊನಗಾನಹಳ್ಳಿ ಗ್ರಾಮದ ಯುವತಿ ರಾಧಮ್ಮ ಅವರ ವಿವಾಹ ಕಳೆದ 4 ವರ್ಷಗಳ ಹಿಂದೆ ಮಂಜುನಾಥ್ ಎಂಬುವರೊಂದಿಗೆ ಆಗಿತ್ತು.
ಈ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
RELATED TOPICS:
English summary :Chikkaballapura