ಗೂಡಂಗಡಿಗಳಿಗೆ ಬೆಂಕಿ. ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ | Janata news
ಚಿತ್ರದುರ್ಗ : ಹತ್ತಕ್ಕೂ ಅಧಿಕ ಗೂಡಂಗಡಿಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಟ್ಟು ಕರಕಲಾದ ಘಟನೆ ಚಿತ್ರದುರ್ಗದ ಗಾಂಧಿ ಸರ್ಕಲ್ ಬಳಿ ನಡೆದಿದೆ.
ಹೂವು, ಹಣ್ಣು, ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಗೂಡಂಗಡಿಗಳು ಬೆಂಕಿಗೆ ತಗುಲಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಚಿತ್ರದುರ್ಗದ ಗಾಂಧಿಸರ್ಕಲ್ನಲ್ಲಿ ನಡೆದಿದೆ.
ಹತ್ತಕ್ಕೂ ಹೆಚ್ಚು ಅಂಗಡಿಗಳು ಒಂದೇ ಸಾಲಿನಲ್ಲಿದ್ದ ಕಾರಣ ಒಂದು ಅಂಗಡಿಗೆ ಬಿದ್ದ ಬೆಂಕಿ ಉಳಿದ ಅಂಗಡಿಗಳಿಗೂ ಆವರಿಸಿದೆ. ಅಗ್ನಿ ಅವಘಡದಿಂದ ಅಪಾರ ನಷ್ಟವಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ, ಈ ಸಂಬಂಧ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
RELATED TOPICS:
English summary :chitradurga