ಲಾರಿ-ಕಾರು ಡಿಕ್ಕಿ: ಇಬ್ಬರು ಕಬಡ್ಡಿ ಪಟುಗಳ ಸಾವು, ಮೂವರ ಸ್ಥಿತಿ ಗಂಭೀರ | Janata news
ವಿಜಯಪುರ : ಲಾರಿ ಮತ್ತು ಕಾರುಗಳ ನಡುವೆ ಮುಖಾಮುಖಿ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ಕ್ರೀಡಾಪಟುಗಳು ಮೃತಪಟ್ಟ ಘಟನೆ ವಿಜಯಪುರದಲ್ಲಿ ಸಂಭವಿಸಿದೆ.
ವಿಜಯಪುರ ಜಿ. ಕೋಲ್ಹಾರ ತಾಲೂಕಿನ ರೋಣಿಗಾಳ ಕ್ರಾಸ್ ಬಳಿ ಬುಧವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದ್ದು, ಮೂವರು ಕ್ರೀಡಾಪಟುಗಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೊಹೇಲ್(22) ಮತ್ತು ಮಹಾದೇವ(20) ಮೃತರು. ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯತ್ತ ಹತ್ತು ಜನರ ಕಬಡ್ಡಿ ತಂಡ ಟವೇರಾದಲ್ಲಿ ಪ್ರಯಾಣಿಸುತ್ತಿತ್ತು.
ಇಂದು ಬೆಳಗ್ಗೆ ರೋಣಿಗಾಳ ಕ್ರಾಸ್ನಲ್ಲಿ ಲಾರಿ ಮತ್ತು ಟವೇರಾ ನಡುವೆ ಡಿಕ್ಕಿಯಾಗಿದ್ದು, ಟವೇರಾ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟವೇರಾದಲ್ಲಿ ಮುಂಭಾಗ ಕುಳಿತ್ತಿದ್ದ ಮಹಾರಾಷ್ಟ್ರದ ಮೂಲದ ಕ್ರೀಡಾಪಟುಗಳು ಮೃತಪಟ್ಟಿದ್ದು, ಉಳಿದ 8 ಮಂದಿ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.