ಸಿಡಿ ಕೇಸ್: ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? | Janata news
ಬೆಂಗಳೂರು : ಸೆಕ್ಸ್ ಸಿಡಿ ಪ್ರಕರಣ ಸಂಬಂಧ ಕೆಪಿಸಿಸಿ ಮತ್ತು ರಾಜ್ಯ ಬಿಜೆಪಿ ಘಟಕದ ನಡುವೆ ಟ್ವೀಟ್ ವಾರ್ ಮುಂದುವರಿದಿದೆ.
ಭ್ರಷ್ಟಾಚಾರ, ಅವ್ಯವಹಾರ, ಅಕ್ರಮ, ಸಿಡಿ ಇತ್ಯಾದಿ ವಿಚಾರ ಮುಂದಿಟ್ಟುಕೊಂಡು ಪರಸ್ಪರ ಎರಡೂ ಪಕ್ಷಗಳ ನಾಯಕರು ಕೆಲ ಆರೋಪಿಗಳ ಜತೆ ಇರುವ ಫೋಟೋ ಪ್ರಕಟಿಸಿ ಲೇವಡಿ ಮಾಡಿಕೊಳ್ಳುವ ಕಾರ್ಯ ಮಾಡಿವೆ.
ಸಿಡಿ ಪ್ರಕರಣ ಮುಖ್ಯ ಸೂತ್ರಧಾರ ನರೇಶ್ ಗೌಡ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಟ್ಟಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿರುವ ಬಿಜೆಪಿಗೆ ಇದೀಗ ಕಾಂಗ್ರೆಸ್ ಕೂಡ ಟಾಂಗ್ ನೀಡಿದೆ.
ನಾಲ್ಕು ಫೋಟೋ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ಬಿಜೆಪಿಯೇ ಹೇಳಬೇಕು, ದೇಶದ್ರೋಹಿ ಮತ್ತು ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಏನು ಸಂಬಂಧ? ಡ್ರಗ್ ಡೀಲರ್ಗೂ ತೇಜಸ್ವಿ ಸೂರ್ಯನಿಗೂ ಏನು ಸಂಬಂಧ? ಪ್ರತಾಪ್ ಸಿಂಹನಿಗೂ ಈ ಆರೋಪಿಗೂ ಏನು ಸಂಬಂಧ? ಲಕ್ಷ್ಮಣ ಸವದಿ ಮತ್ತು ವಂಚಕ ಯುವರಾಜನಿಗೂ ಏನು ಸಂಬಂಧ? ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಘಟಕ, ಆರೋಪಿ ಭವಿತ್ ಸಂಸದ ಪ್ರತಾಪಸಿಂಹ ಜತೆ, ಡ್ರಗ್ ಡೀಲರ್ಸ್ ಜತೆ ತೇಜಸ್ವಿ ಸೂರ್ಯ ಇರೋ ಫೋಟೋಗಳಲ್ಲಿ ರಿಲೀಸ್ ಮಾಡಿದೆ.
ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ @BJP4Karnataka
— Karnataka Congress (@INCKarnataka) March 17, 2021
ದೇಶದ್ರೋಹಿ & ಅತ್ಯಾಚಾರಿಯೊಂದಿಗೆ @narendramodi ಅವರಿಗೆ ಏನು ಸಂಬಂಧ?@Tejasvi_Surya ಡ್ರಗ್ ಡೀಲರ್ಗೂ ಏನು ಸಂಬಂಧ?@mepratap ಹಾಗೂ ಈ ಆರೋಪಿಗೂ ಏನು ಸಂಬಂಧ?@LaxmanSavadi & ಯುವರಾಜನಿಗೂ ಏನು ಸಂಬಂಧ?
ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? https://t.co/OjOlKk4kHu pic.twitter.com/70voo4asIF