ಆರೋಗ್ಯ ಸಚಿವ ಸುಧಾಕರ್ ಮನೆ ಮುಂದೆ ಸಿಬ್ಬಂದಿ ಜಗಳ! | Janata news
ಬೆಂಗಳೂರು : ಆರೋಗ್ಯ ಸಚಿವ ಸುಧಾಕರ್ ಮನೆ ಎದುರು ಅಂಗಿ ಕಿತ್ತುಬರುವಂತೆ ಸಿಬ್ಬಂದಿ ಜಗಳ ನಡೆದಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಸಚಿವ ಸುಧಾಕರ್ ಮನೆಯ ಮುಂದೆ, ಗನ್ಮ್ಯಾನ್ ತಿಮ್ಮಯ್ಯ ಹಾಗೂ ಡ್ರೈವರ್ ಸೋಮಶೇಖರ್ ನಡು ಬೀದಿಯಲ್ಲಿ ಉರುಳಾಡಿಕೊಂಡು ಅಂಗಿ ಕಿತ್ತು ಹೋಗುವಂತೆ ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.
ಸಚಿವ ಸುಧಾಕರ್ ಅವರ ಗನ್ ಮ್ಯಾನ್ ತಿಮ್ಮಯ್ಯ ಹಾಗೂ ಖಾಸಗಿ ಡ್ರೈವರ್ ಸೋಮಶೇಖರ್ ಇಬ್ಬರೂ ಮನೆಯ ಮುಂದೆಯೇ ಹೊಡೆದಾಡಿಕೊಂಡಿದ್ದು, ಅಲ್ಲಿಯೇ ಪೊಲೀಸರು ಇಬ್ಬರ ಹೊಡೆದಾಟವನ್ನು ಬಿಡಿಸಲು ಹರಸಾಹಸ ಪಟ್ಟಿದ್ದಾರೆ.
RELATED TOPICS:
English summary :Bangalore