ಕೊಡಗಿನ ಪೊನ್ನಂಪೇಟೆಯ ಲಕ್ಕುಂದಲ್ಲಿ ಸಿಕ್ಕಿದ ಹುಲಿಯ ಮೃತದೇಹ, ಕೊನೆಗೂ ನಿಟ್ಟುಸಿರು ಬಿಟ್ಟ ಸ್ಥಳೀಯರು! | Janata news
ಕೊಡಗು : ಬೆಳಿಗ್ಗೆ ಗಂಡು ಹುಲಿಯ ಕೊಳೆತ ಶವವೊಂದು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಸಮೀಪದ ಲಕ್ಕುಂದ ಅರಣ್ಯದ ಆನೆ ಕಂದಕದಲ್ಲಿ ಸಿಕ್ಕಿದೆ.
ನರ ಹಂತಕ ಹುಲಿಯು 25ಕ್ಕೂ ಅಧಿಕ ಜಾನುವಾರುಗಳನ್ನು ಕೊಂದಿದ್ದಲ್ಲದೆ, ಮೂವರು ಮನುಷ್ಯರನ್ನೂ ಬಲಿ ತೆಗೆದುಕೊಂಡಿತ್ತು.
ಈಗ ಸತ್ತಿರುವ ಹುಲಿಯು ಜನರನ್ನು ಕೊಂದ ಹುಲಿಯೇ ಆಗಿದೆ ಎಂದು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಣಾವತ್ ಸಿಂಗ್ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ನಾಗರಹೊಳೆ ಅರಣ್ಯದ ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
RELATED TOPICS:
English summary :Kodagu