ಒಬ್ಬನೊಂದಿಗೆ ತಾಯಿ - ಮಗಳು ವಿವಾಹೇತರ ಸಂಬಂಧಕ್ಕೆ ಅಡ್ಡಿಯಾದ ತಂದೆ ಕೊಲೆ! | Janata news
ದಾವಣಗೆರೆ : ಮಗಳು ಹಾಗು ಮೊಮ್ಮಗಳ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾದ ತಂದೆ ಕೊಲೆ ಮಾಡಿರುವ ಘಟನೆ ಹೊನ್ನಾಳಿ ತಾಲೂಕಿನ ಕುಳಗಟ್ಟೆಯಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಂಜಪ್ಪ ತನ್ನ ಮಗಳು ಉಷಾ ಮತ್ತು ಮೊಮ್ಮಗಳು ಸಿಂಧು ಜೊತೆ ಜೀವನ ಮಾಡುತ್ತಿದ್ದರು. ಮಂಜಪ್ಪನ ಮಗಳು ಉಷಾ ಹಾಗೂ ಮೊಮ್ಮಗಳು ಸಿಂಧು ಇಬ್ಬರು ಕೂಡ ಒಂದೇ ವ್ಯಕ್ತಿಯ ಜೊತೆ ವಿವಾಹೇತರ ಸಂಬಂಧ ಸಾಗಿಸುತ್ತಿದ್ದರು.
ಅದೇ ಗ್ರಾಮದ ನಿವಾಸಿ, ಮದುವೆಯಾಗಿ ಒಂದು ಮಗುವಿರುವ ಶ್ರೀನಿವಾಸ ಜೊತೆ ಉಷಾ ಹಾಗೂ ಸಿಂಧು ಇಬ್ಬರು ವಿವಾಹೇತರ ಸಂಬಂಧ ಹೊಂದಿದ್ದರು. ಈ ಸುದ್ದಿ ತಿಳಿದ ಮಂಜಪ್ಪ ಮಗಳಿಗೆ ಮತ್ತು ಮೊಮ್ಮಗಳಿಗೆ ಬುದ್ಧಿ ಮಾತು ಹೇಳ್ತಿದ್ದ. ಈ ವಿಷಯವಾಗಿ ಮಂಜಪ್ಪನ ಮೇಲೆ ತಾಯಿ ಮತ್ತು ಮಗಳು ಕೊಪಗೊಂಡಿದ್ದರು.
ಮಗಳು ಉಷಾ ಹಾಗೂ ಉಷಾಳ ಮಗಳು ಸಿಂಧು ಹಾಗೂ ಶ್ರೀನಿವಾಸ ಎಂಬ ವ್ಯಕ್ತಿಯ ಜೊತೆ ಸೇರಿಕೊಂಡು ಮಂಜಪ್ಪನನ್ನು ತೋಟಕ್ಕೆ ಕರೆದುಕೊಂಡು ಹೋಗಿ ಕುಡಿಸಿದ್ದಾರೆ. ಬಳಿಕ ಮತ್ತಿನಲ್ಲಿದ್ದ ಮಂಜಪ್ಪನ ತಲೆ ಮೇಲೆ ಆರೋಪಿ ಶ್ರೀನಿವಾಸ ಕಲ್ಲಿನಿಂದ ಹೊಡೆದು ಪಕ್ಕದ ಚಾನಲ್ ನೀರಿಗೆ ಹಾಕಿದ್ದ.
ಎರಡ್ಮೂರು ವಾರಗಳಿಂದ ಅಂದ್ರೆ ಮಾರ್ಚ್ 3ರಿಂದ ಕಾಣ್ತಿಲ್ಲ ಎಂದು ಮೊದಲನೇ ಹೆಂಡ್ತಿಯ ಮಗಳು ಮತ್ತು ಮೊಮ್ಮಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಎರಡನೇ ಹೆಂಡ್ತಿಯ ಮಗಳಾದ ಉಷಾ ಮತ್ತು ಆಕೆಯ ಮಗಳು ಸಿಂಧುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಮಂಜಪ್ಪನ ಕೊಲೆಗೆ ಉಷಾ ಹಾಗೂ ಸಿಂಧು ಇಬ್ಬರು ಮಾಸ್ಟರ್ ಪ್ಲಾನ್ ಮಾಡಿ ಶ್ರೀನಿವಾಸನಿಂದ ಕೊಲೆ ಮಾಡಿಸಿರುವುದರ ಬಗ್ಗೆ ತಿಳಿದಿದೆ.