ರೈತರ ಮೇಲೆ ಚಿರತೆ ದಾಳಿ: ಚಿರತೆಯೊಂದಿಗೆ ಧೈರ್ಯದಿಂದ ಹೋರಾಡಿದ ಇಬ್ಬರು ರೈತರು! | Janata news
ಹಾವೇರಿ : ಕಳೆದ ರಾತ್ರಿ ಜಮೀನಿನಲ್ಲಿ ನೀರು ಹಾಯಿಸಲು ಹೋದ ರೈತರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಹಾಡೆ ಗ್ರಾಮದಲ್ಲಿ ನಡೆದಿದೆ.
ಈ ಕಾದಾಟದಲ್ಲಿ ಚಿರತೆ ಸಾವನ್ನಪ್ಪಿದೆ. ಇಬ್ಬರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. .
ಗ್ರಾಮದ ರೈತ 46 ವರ್ಷದ ಗದಿಗೆಪ್ಪ ಯಳವಳ್ಳಿ ಮತ್ತು 45 ವರ್ಷದ ಕೃಷ್ಣಪ್ಪ ಮೂಡಬಾಗಿಲ ಎಂಬ ರೈತರು ರಾತ್ರಿ ಜಮೀನಿಗೆ ನೀರು ಹಾಯಿಸಲು ಹೋಗಿದ್ದರು. ಈ ವೇಳೆ ಕೆಲಸ ಮುಗಿಸಿ ಹಿಂದಿರುಗುವ ವೇಳೆ ಚಿರತೆ ದಾಳಿ ಮಾಡಿದೆ.
ಗದಿಗೆಪ್ಪ ಚಿರತೆ ಜೊತೆ ಸೆಣಸಾಟ ನಡೆಸಿದ್ದಾನೆ. ನಂತರ ಗದಿಗೆಪ್ಪನ ಕೂಗಾಟ ಕೇಳಿ, ಚಿರತೆ ಕಂಡು ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಸಹಾಯಕ್ಕೆ ಧಾವಿಸಿದ್ದಾರೆ. ಈ ವೇಳೆ ಪ್ರಾಣ ರಕ್ಷಣೆಗೆ ಚಿರತೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಆಗ ಚಿರತೆ ನೆಲಕ್ಕೆ ಬಿದ್ದಿದೆ.
ಗದಿಗೆಪ್ಪನ ತಲೆಗೆ ಚಿರತೆ ದಾಳಿಯಿಂದ ಬಲವಾದ ಪೆಟ್ಟು ಬಿದ್ದಿದೆ, ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಆರ್ಎಫ್ಒ ಹೇಮಗಿರಿ ಅಂಗಡಿ, ಸಿಪಿಐ ಮಂಜುನಾಥ ಪಂಡಿತ, ಪಿಎಸ್ಐ ಕೃಷ್ಣಪ್ಪ ತೋಪಿನ ಭೇಟಿ ನೀಡಿ ಪರಿಶೀಲಿಸಿದರು.
ಗಾಯಾಳುಗಳ ಸಂಬಂಧಿಕರು ಹಾಗೂ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಹತ್ಯೆಯಾಗಿರುವ ಚಿರತೆ ಮಾತ್ರವಲ್ಲದೆ, ಗ್ರಾಮದ ಬಳಿ ಸಾಕಷ್ಟು ಚಿರತೆಗಳಿವೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಗಾಯಗೊಂಡವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.