ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ತೆಗೆದು ಹಾಕುವ ಟಾಟಾ ಗ್ರೂಪ್ನ ನಿರ್ಣಯ ಸರಿಯಾಗಿದೆ - ಸುಪ್ರಿಂಕೋರ್ಟ್ | Janata news
ನವದೆಹಲಿ : ದೇಶದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಟಾಟಾ ಸನ್ಸ್ ಸಮೂಹಕ್ಕೆ ಇಂದು ದೊರೆತ ಅತಿ ದೊಡ್ಡ ಗೆಲುವೊಂದರಲ್ಲಿ, 2016ರಲ್ಲಿ ಟಾಟಾ ಗ್ರೂಪ್ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಮತ್ತು ಮಿಸ್ತ್ರಿ ಅವರನ್ನು ಪುನಃ ನೇಮಿಸುವ ಕಂಪನಿ ಕಾನೂನು ನ್ಯಾಯಮಂಡಳಿಯ ಆದೇಶವನ್ನು ತಳ್ಳಿಹಾಕಿದೆ.
ಅಡಿಗೆ ಉಪ್ಪಿನಿಂದ ಹಿಡಿದು ಕಾರು/ಸಾಫ್ಟ್ವೇರ್ ಸೇರಿದಂತೆ 100 ಶತಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸುವ ಟಾಟಾ ಗ್ರೂಪ್ನ ಅಧ್ಯಕ್ಷರನ್ನಾಗಿದ್ದ ಸೈರಸ್ ಮಿಸ್ತ್ರಿ ಅವರನ್ನು 2016ರಲ್ಲಿ ತೆಗೆದು ಹಾಕಲಾಗಿತ್ತು.
ನ್ಯಾಷನಲ್ ಕಂಪನಿ ಲಾ ಮೇಲ್ಮನವಿ ನ್ಯಾಯಮಂಡಳಿ(ಎನ್ಸಿಎಲ್ಎಟಿ) 2019ರ ಡಿಸೆಂಬರ್ 18 ರಂದು ಶ್ರೀ ಮಿಸ್ತ್ರಿ ಅವರನ್ನು ಸಂಘಟನೆಯ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಪುನಃ ನೇಮಿಸಿತ್ತು. ಸುಪ್ರಿಂಕೋರ್ಟ್ ನಲ್ಲಿ ಟಾಟಾ ಸನ್ಸ್ ಸವಾಲು ಮಾಡಿದ ಆ ಆದೇಶವನ್ನು ಈಗ ರದ್ದುಪಡಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕುವ ನಿರ್ಧಾರ ಸರಿಯಾಗಿದೆ ಎಂದು ಹೇಳಿದರು. ಕಾನೂನಿನ ಎಲ್ಲಾ ಪ್ರಶ್ನೆಗಳು ಟಾಟಾ ಗ್ರೂಪ್ ಪರವಾಗಿವೆ, ಎಂದು ನ್ಯಾಯಾಧೀಶರು ಹೇಳಿದರು.
2016 ರ ಅಕ್ಟೋಬರ್ನಲ್ಲಿ ನಡೆದ ಟಾಟಾ ಬೋರ್ಡ್ ಮೀಟಿಂಗ್(ಮಂಡಳಿ ಸಭೆ)ಯಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ನ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವುದನ್ನು, ರಕ್ತ ಕ್ರೀಡೆ ಮತ್ತು ಹೊಂಚುದಾಳಿಯಂತೆ ಮತ್ತು ಸಾಂಸ್ಥಿಕ ಆಡಳಿತದ ತತ್ವಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಶಪೂರ್ಜಿ ಪಲ್ಲೊಂಜಿ ಗ್ರೂಪ್ ಆಗ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.