ಮದುವೆ ದಿಬ್ಬಣವಿದ್ದ ವಾಹನ ನಾಲೆಗೆ, ಬಾಲಕಿಯರಿಬ್ಬರು ಸ್ಥಳದಲ್ಲೇ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ! | Janata news
ಮೈಸೂರು : ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನಲ್ಲಿ ಭಾನುವಾರ ತಡರಾತ್ರಿ ಚುಂಚನಕಟ್ಟೆ ನಾಲೆಗೆ ಟಾಟಾ ಏಸ್ ವಾಹನವೊಂದು ಉರುಳಿಬಿದ್ದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿ ಸುಮಾರು 20 ಮಂದಿ ಗಾಯಗೊಂಡಿದ್ದಾರೆ
ಮೈಸೂರು ಜಿಲ್ಲೆಯ ಶ್ರೀರಾಮಪುರದಲ್ಲಿ ನಾಳೆ ನಡೆಯಲಿರುವ ಮದುವೆಗೆ ಇವರೆಲ್ಲ ಕುಪ್ಪೆ ಗ್ರಾಮದಿಂದ ಟಾಟಾ ಏಸ್ ವಾಹನದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಏಸ್ ವಾಹನ ಮೂರು ಬಾರಿ ಪಲ್ಟಿ ಹೊಡೆದಿದ್ದು, ಕಟ್ಟೆಪುರ ನಾಲೆಗೆ ಉರುಳಿದೆ.
ಪರಿಣಾಮ ವಾಹನದಲ್ಲಿದ್ದ ಕುಪ್ಪೆ ಗ್ರಾಮದ ಕೃಷ್ಣಯ್ಯ ಎಂಬವರ ಪುತ್ರಿರಾದ ಪುಷ್ಪಲತಾ (10), ಪಲ್ಲವಿ (9) ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡವರನ್ನು ಕೆ ಆರ್ ನಗರ ಆಸ್ಪತ್ರೆಗೆ ದಾಖಲಿಸಲಾಗಿದೆ ನಾಲೆಯಲ್ಲಿ ನೀರಿಲ್ಲದ ಕಾರಣ ದೊಡ್ಡ ಅಪಘಾತವೊಂದು ತಪ್ಪಿದೆ.
ಕೆ.ಆರ್. ನಗರ ಮತ್ತು ಚುಂಚನಕಟ್ಟೆ ಪೊಲೀಸರನ್ನು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆ ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.