ಸಿಡಿ ಪ್ರಕರಣ: ಸಾಕ್ಷ್ಯ ಇದ್ದರೆ ಪೊಲೀಸರಿಗೆ ನೀಡಿ ಎಂದ ಡಿ.ಕೆ.ಶಿವಕುಮಾರ್! | Janata news
ರಾಯಚೂರು : ಸಾಕ್ಷ್ಯಗಳಿದ್ರೆ ಪೊಲೀಸರಿಗೆ ನೀಡಲಿ ಯುವತಿ ಪೋಷಕರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಲಿಂಗಸೂಗೂರು ಮುದಗಲ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನ್ ಬೇಕಾದರೂ ಮಾಡಲಿ, ಅದಕ್ಕೂ ನನಗೂ ಸಂಬಂಧವಿಲ್ಲ. ಅವರು ಒತ್ತಡದಲ್ಲಿದ್ದಾರೆ, ಅವರು ಏನಾದರೂ ಹೇಳಿಕೊಳ್ಳಲಿ. ನನಗೂ ಅದಕ್ಕೆ ಸಂಬಂಧವಿಲ್ಲ. ದಾಖಲೆಗಳಿದ್ದರೆ ತನಿಖೆಯಾಗಲಿ ಎಂದರು.
ತಮ್ಮ ಮಗಳನ್ನು ರಾಜಕೀಯ ದಾಳವಾಗಿ ಬಳಸಲಾಗುತ್ತಿದ್ದು, ಸಾಕಷ್ಟು ಚಿತ್ರಹಿಂಸೆ ಕೊಟ್ಟು, ಒತ್ತಡಪೂರ್ವಕವಾಗಿ ಹೇಳಿಕೆ ಪಡೆಯಲು ಪ್ರಯತ್ನಿಸಲಾಗಿದೆ.ಈ ರೀತಿಯಲ್ಲಿ ಆಕೆ ಹೇಳಿಕೆ ನೀಡುವುದು ಬೇಡ. ಆಕೆ ಮೊದಲು ನಮ್ಮ ಮನೆಗೆ ಬರಲಿ, ಒಂದೆರೆಡು ದಿನಗಳ ನಂತರ ನ್ಯಾಯಾಧೀಶರ ಎದುರೇ ಹೇಳಿಕೆ ಪಡೆಯಲಿ ಎಂದು ಸಂತ್ರಸ್ತ ಯುವತಿ ತಂದೆ ಹೇಳಿದರು.