ಸಿಡಿ ಪ್ರಕರಣ: ಯಡಿಯೂರಪ್ಪನವರನ್ನು ನೋಡಿದ್ರೆ ಅವರಲ್ಲೇ ಹುಳುಕಿದೆ ಅನ್ನಿಸುತ್ತಿದೆ: ಸಿದ್ದರಾಮಯ್ಯ | Janata news
ಬೆಳಗಾವಿ : ಪ್ರಕರಣದ ಕುರಿತಂತೆ ಸಿಎಂ ಯಡಿಯೂರಪ್ಪ ಮೌನವಹಿಸಿದ್ದಾರೆ. ಸಿಡಿ ಪ್ರಕರಣ ಹಾಗೂ ಯುವತಿ ರಕ್ಷಣೆ ನೀಡುವ ವಿಚಾರವಾಗಿ ಯಡಿಯೂರಪ್ಪ ಮಾತಾಡಬೇಕು ಎಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ಹೇಳಿದರು.
ಯುವತಿ ನನ್ನ ಬಳಿ ರಕ್ಷಣಾ ಕೊಡಿ ಅಂತಾ ಕೇಳಿಲ್ಲ. ಆದರೆ ನನಗೆ ರಕ್ಷಣೆ ಕೊಡಿಸಿ ಅಂತಾ ಕೇಳಿದ್ದಾರೆ ಹೀಗಾಗಿ ಸರ್ಕಾರಕ್ಕೆ ರಕ್ಷಣೆ ಕೊಡಲು ಹೇಳಿದ್ದೇನೆ. ರಾಜ್ಯದ ಸಿಎಂ ಆಗಿರುವ ಯಡಿಯೂರಪ್ಪನವರು ಸಿಡಿ ಮತ್ತು ರಕ್ಷಣೆ ವಿಚಾರವಾಗಿ ಮಾತಾಡಬೇಕು. ಈ ವಿಚಾರ ರಾಷ್ಟ್ರದಾದ್ಯಂತ ಚರ್ಚೆ ಆಗುತ್ತಿದೆ. ಆದರೆ ಯಡಿಯೂರಪ್ಪ ಮೌನವಾಗಿ ಇರೋದು ನೋಡಿದ್ರೆ ಅವರಲ್ಲೇ ಹುಳುಕಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಿಡಿ ಪ್ರಕರಣದಲ್ಲಿ ಎಸ್ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ. ಸಿಡಿ ಪ್ರಕರಣದಲ್ಲಿ ಯಡಿಯೂರಪ್ಪನವರದ್ದು ಹುಳುಕಿದೆ. ಉಪಚುನಾವಣೆಯಲ್ಲಿ ಸಿಡಿ ಪ್ರಕರಣ ಬಿಜೆಪಿಗೆ ವಿರುದ್ಧ ಆಗುತ್ತದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಆಗುತ್ತದೆ ಎಂದರು.