ನ್ಯಾಯಾಧೀಶರೆದುರು ಸಿಡಿ ಲೇಡಿ ಹಾಜರಾಗಲು ಕೋರ್ಟ್ ಅನುಮತಿ..! | Janata news
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ನೇರವಾಗಿ ಹಾಜರಾಗಲು ಕೋರ್ಟ್ ಅನುಮತಿ ನೀಡಿದೆ.
ಈ ಸಿಡಿ ಪ್ರಕರಣದಲ್ಲಿ ಯುವತಿಯ ಹೇಳಿಕೆ ತುಂಬಾನೇ ಮುಖ್ಯವಾಗಿದ್ದು, ಸಧ್ಯ ನ್ಯಾಯಾಧೀಶರ ಎದುರು ನೇರವಾಗಿ ಹಾಜರಾಗಲು ಕೋರ್ಟ್ ಅನುಮತಿ ನೀಡಿದೆ.
ಇಂದು ಬೆಳಗ್ಗೆ ವಕೀಲರಾದ ಜಗದೀಶ್ ಅವರು, ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹೋಗಿ ಡೆಪ್ಯೂಟಿ ರಿಜಿಸ್ಟ್ರಾರ್ ಭೇಟಿ ಮಾಡಿದ್ದರು. ಈ ವೇಳೆ ಯುವತಿ ಹೇಳಿಕೆ ನೀಡಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ನ್ಯಾಯಾಲಯದಿಂದ ಯುವತಿ ಹೇಳಿಕೆ ನೀಡಲು ಅನುಮತಿ ದೊರೆತಿದೆ.
ಅರ್ಜಿ ಸಲ್ಲಿಸಿದ ಬಳಿಕ ಮಾತನಾಡಿದ ವಕೀಲ ಜಗದೀಶ್ ಅವರು, ಆದೇಶ ಪ್ರತಿ ನನ್ನ ಕೈ ಸೇರಿದೆ. ಯುವತಿಯನ್ನ ಯಾವಾಗ ಹಾಜರುಪಡಿಸಬೇಕು ಎಂಬುದು ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಇಮೇಲ್ ಮೂಲಕ ನನಗೆ ಮಾಹಿತಿ ನೀಡಲಿದ್ದಾರೆ. ನ್ಯಾಯಾಲಯ ಯಾವಾಗ ಹೇಳಿದರೂ ಹಾಜರುಪಡಿಸಲು ಸಿದ್ಧ ಎಂದರು.