ಸಿದ್ದರಾಮಯ್ಯ ಕೂಡಲೇ ಜನರ ಕ್ಷಮೆಯಾಚಿಸಬೇಕು: ಶ್ರೀ ರಾಮುಲು ಕಿಡಿ | Janata news
ರಾಯಚೂರು : ರಾಜ್ಯ ಸಂಸದರು ಗುಲಾಮರು ಎಂದ ಸಿದ್ದರಾಮಯ್ಯಗೆ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು.. ಸಿದ್ದರಾಮಯ್ಯನವರಿಗೆ ಸ್ಪಷ್ಟಪಡಿಸುವುದಕ್ಕೆ ಇಚ್ಛಿಸುತ್ತೇನೆ, ಸಂಸದರಷ್ಟೇ ಅಲ್ಲದೇ ಸ್ವತಃ ಪ್ರಧಾನಿಗಳು ಸಹ ಜನರ ಸೇವಕರೇ ವಿನಾ, ಗುಲಾಮರಲ್ಲ. ಇಂಥ ಮಾತು ಮುಖ್ಯಮಂತ್ರಿ ಪದವಿಯಲ್ಲಿದ್ದ ವ್ಯಕ್ತಿಗೆ ಉಚಿತವಲ್ಲ. ಗುಲಾಮರು ಎಂಬ ಮಾತನ್ನು ಹಿಂಪಡೆಯಲಿ ಎಂದಿದ್ದಾರೆ.
ಇದು ಜನರಿಗೆ ಮಾಡಿದ ಅಪಮಾನ. ಕೂಡಲೇ ಸಿದ್ದರಾಮಯ್ಯ ಗುಲಾಮರು ಅನ್ನುವ ಮಾತು ವಾಪಸ್ ತಗೆದುಕೊಳ್ಳಬೇಕು. ಸಿದ್ದರಾಮಯ್ಯ ಜನರ ಕ್ಷಮೆಯಾಚಿಸಬೇಕು ಎಂದರು.
ಪ್ರಧಾನಿ ಮೋದಿ ಜನಸೇವಕರು. ಹಾಗೇ ಸಂಸದರು ಆ ಕ್ಷೇತ್ರಕ್ಕೆ ಸೇವಕರು. ಕಾಂಗ್ರೆಸ್ ಪಕ್ಷದಲ್ಲೂ ಸಂಸದರಿದ್ದಾರೆ. ಹಾಗಾದರೆ ಅವರು ಕೂಡ ಗುಲಾಮಾರಾಗುತ್ತಾರಾ ಎಂದು ಪ್ರಶ್ನಿಸಿದರು.