ಶ್ರೀನಗರದ ಬಿಜೆಪಿ ನಾಯಕನ ಮನೆಯ ಮೇಲೆ ಉಗ್ರರ ದಾಳಿ : ಭದ್ರತಾ ಸಿಬ್ಬಂದಿ ಸಾವು | ಜನತಾ ನ್ಯೂಸ್
ಶ್ರೀನಗರ : ಶ್ರೀನಗರದ ಬಿಜೆಪಿ ನಾಯಕನ ಮನೆಯ ಮೇಲೆ ಅಪರಿಚಿತ ಉಗ್ರರು ಗುರುವಾರ ನಡೆಸಿದ ದಾಳಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಶ್ರೀನಗರದ ನೌಗಮ್ನ ಅರಿಬಾಗ್ನಲ್ಲಿರುವ ಬಿಜೆಪಿ ಮುಖಂಡರ ಮನೆಯಲ್ಲಿ ಭದ್ರತೆಗೆ ನಿಯೋಜಿಸಲ್ಪತ್ತಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಗಳ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಮೀಜ್ ರಾಜಾ ಎಂದು ಗುರುತಿಸಲ್ಪಟ್ಟ ಪೋಲೀಸ್ ಸಿಬ್ಬಂದಿಯನ್ನು ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಭಯೋತ್ಪಾದಕರು ಗಾಯಾಳು ಪೋಲಿಸ್ ಸಿಬ್ಬಂದಿಯಾ ರೈಫಲ್ನೊಂದಿಗೆ ಪರಾರಿಯಾಗಿದ್ದಾರೆ.
ದಾಳಿಯ ಸಮಯದಲ್ಲಿ ಬಾರಾಮುಲ್ಲಾ ಮತ್ತು ಕುಪ್ವಾರಾ ಜಿಲ್ಲೆಗಳ ಬಿಜೆಪಿ ಉಸ್ತುವಾರಿ ಹೊತ್ತಿರುವ ಬಿಜೆಪಿ ನಾಯಕ ಖಾನ್ ಮನೆಯಲ್ಲಿ ಇರಲಿಲ್ಲ, ಎನ್ನಲಾಗಿದೆ