ಜನತಾ ಕರ್ಫ್ಯೂ ಮಹಾರಾಷ್ಟ್ರದಲ್ಲಿ : ಮುಂದಿನ 15 ದಿನಗಳವರೆಗೆ ಕಠಿಣ ನಿರ್ಬಂಧ - ಸಿಎಂ ಠಾಕ್ರೆ | ಜನತಾ ನ್ಯೂಸ್
ಮುಂಬೈ : ಮಹಾರಾಷ್ಟ್ರದಲ್ಲಿ ವಿಪರೀತವಾಗಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಕುರಿತು ಕೊನೆಗೂ ಎಚ್ಚೆತ್ತ ಹಾಗೆ ಕಂಡುಬಂದ ಮಹಾರಾಷ್ಟ್ರ ರಾಜ್ಯ ಸರ್ಕಾರ, ನಾಳೆ ಬುಧವಾರ ಸಂಜೆಯಿಂದ ರಾಜ್ಯದಾದ್ಯಂತ 15 ದಿನಗಳ ಜನತಾ ಕರ್ಫ್ಯೂ ವಿಧಿಸಲು ನಿರ್ಧರಿಸಿದೆ.
ಈ ಹೊಸ ನಿರ್ಬಂಧಗಳ ಅಡಿಯಲ್ಲಿ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗುವುದು. ಕೋವಿಡ್-19 ಪ್ರಕರಣಗಳ ಹೆಚ್ಚಳವು ಆರೋಗ್ಯ ಮೂಲಸೌಕರ್ಯವನ್ನು ತಗ್ಗಿಸಿದೆ ಮತ್ತು ಈ ಕರ್ಫ್ಯೂ ಸರಪಳಿಯನ್ನು ಮುರಿಯಲು ಉದ್ದೇಶ ಹೊಂದಿದೆ, ಎಂದು ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಹೇಳಿದರು.
ನಾಲ್ಕು ಜನರ ಗುಂಪುಗಳನ್ನು ನಿಷೇಧಿಸುವ ನಿಯಮವಾದ ಸೆಕ್ಷನ್-144 ನಾಳೆಯಿಂದ ಮಹಾರಾಷ್ಟ್ರದಾದ್ಯಂತ ಜಾರಿಯಲ್ಲಿರುತ್ತದೆ ಮತ್ತು ಅಗತ್ಯ ಪ್ರಯಾಣ ಮತ್ತು ಸೇವೆಗಳನ್ನು ಮಾತ್ರ ಅನುಮತಿಸಲಾಗುವುದು, ಎಂದು ಠಾಕ್ರೆ ಹೇಳಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಲಾಕ್ ಡೌನ್ ಜಾರಿಗೊಳಿಸುತ್ತಿಲ್ಲ, ಆದರೆ ಮುಂದಿನ 15 ದಿನಗಳವರೆಗೆ ಕಠಿಣ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಕೋವಿಡ್ ಸೋಂಕುಗಳ ಸರಪಳಿಯನ್ನು ಮುರಿಯಲು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಜನರ ಜೊತೆಗೂಡುವಿಕೆ ಸೇರಿದಂತೆ ಎಲ್ಲಾವನ್ನೂ ನಿಷೇಧ ಹೇರಲಾಗಿದೆ.
ಮಾರುಕಟ್ಟೆಗಳು, ಮಾಲ್ಗಳು, ಚಿತ್ರಗಳ ಶೂಟಿಂಗ್, ಕಡಲತೀರಗಳು ಮುಚ್ಚಲ್ಪಡುತ್ತವೆ. ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಿಗೆ ನಿಷೇದ ಮುಂದುವರೆಯಲಿದೆ, ಆದರೂ ಮನೆ ವಿತರಣೆ(ಹೋಂ ಡಿಲಿವೆರಿ) ಮತ್ತು ಟೇಕ್ಅವೇಗಳನ್ನು ಅನುಮತಿಸಲಾಗುತ್ತದೆ.
ಆದರೂ, ಅಂಗಡಿಯವರು ಮತ್ತು ಅಗತ್ಯ ಸೇವೆಗಳಲ್ಲಿರುವ ವ್ಯಾಕ್ಸಿನೇಷನ್ ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸಲಾಗುತ್ತದೆ.
ಯುದ್ಧವು ಮತ್ತೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ಅಪಾಯಕಾರಿಯಾಗಿ ಸ್ಫೋಟಗೊಳ್ಳುತ್ತಿವೆ, ಎಂದು ಹೇಳಿದ ಅವರು ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಮನೆಯಿಂದಲೇ ಕೆಲಸ ಮಾಡುವ ಮೂಲಕ ಮತ್ತು ಜನತಾ ಕರ್ಫ್ಯೂ ಅನ್ನು ಸ್ವಯಂಪ್ರೇರಣೆಯಿಂದ ಆಚರಿಸಲು ಜನರನ್ನು ಒತ್ತಾಯಿಸಿದ್ದಾರೆ. ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಆರೋಗ್ಯ ಸೇವೆ, ಬ್ಯಾಂಕುಗಳು, ಮಾಧ್ಯಮ, ಇ-ಕಾಮರ್ಸ್ ಮತ್ತು ಇಂಧನಕ್ಕೆ ಸಂಬಂಧಿಸಿದ ಅಗತ್ಯ ಸೇವೆಗಳು ಮಾತ್ರ ಕಾರ್ಯನಿರ್ವಹಿಸುತ್ತವೆ, ಎಂದಿದ್ದಾರೆ.