ರಾಜ್ಯದಲ್ಲಿಂದು 15785 ಮಂದಿಗೆ ಸೋಂಕು, 146 ಸಾವು | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿಂದು 15,785 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 146 ಜನರು ಸೋಂಕಿಗೆ ಬಲಿಯಾಗಿದ್ದು, 7,098 ಜನರು ಗುಣಮುಖರಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 9,618 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 97 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 11,76,850ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆ 97, ಬಳ್ಳಾರಿ 248, ಬೆಳಗಾವಿ 115, ಬೆಂಗಳೂರು ಗ್ರಾಮಾಂತರ 180, ಬೆಂಗಳೂರು ನಗರ 9618, ಬೀದರ್ 318, ಚಾಮರಾಜನಗರ 108, ಚಿಕ್ಕಬಳ್ಳಾಪುರ 175, ಚಿಕ್ಕಮಗಳೂರು 142. ಚಿತ್ರದುರ್ಗ 74, ದಕ್ಷಿಣ ಕನ್ನಡ 218, ದಾವಣಗೆರೆ 199, ಧಾರವಾಡ 283, ಗದಗ 70, ಹಾಸನ 320, ಹಾವೇರಿ 36, ಕಲಬುರಗಿ 513, ಕೊಡಗು 97, ಕೋಲಾರ 146, ಕೊಪ್ಪಳ 100, ಮಂಡ್ಯ 279, ಮೈಸೂರು 568, ರಾಯಚೂರು 228, ರಾಮನಗರ 71, ಶಿವಮೊಗ್ಗ 169, ತುಮಕೂರು 652, ಉಡುಪಿ 163, ಉತ್ತರ ಕನ್ನಡ 106, ವಿಜಯಪುರ 302, ಯಾದಗಿರಿ ಜಿಲ್ಲೆಯಲ್ಲಿ 190 ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ ಒಟ್ಟು 146 ಜನರ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 97 ಜನರು ಮೃತಪಟ್ಟಿದ್ದಾರೆ. ಹಾಸನ 11, ಮೈಸೂರು 8, ಬೆಂಗಳೂರು ಗ್ರಾಮಾಂತರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಲಾ 6, ಧಾರವಾಡ 3, ಬೀದರ್, ಚಿಕ್ಕಬಳ್ಳಾಪುರ, ಯಾದಗಿರಿ ಜಿಲ್ಲೆಗಳಲ್ಲಿ ತಲಾ ಇಬ್ಬರು, ಬಳ್ಳಾರಿ, ಬೆಳಗಾವಿ, ಹಾವೇರಿ, ಕೊಡಗು, ಕೋಲಾರ, ರಾಮನಗರ, ತುಮಕೂರು, ವಿಜಯಪುರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾಗೆ ತಲಾ ಒಬ್ಬರು ಒಬ್ಬರು ಬಲಿಯಾಗಿದ್ದಾರೆ.