ನಾಳೆ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ವಿಧಿಸುವ ಕುರಿತು ಮನವಿ ಮಾಡಿದ ಮಹಾರಾಷ್ಟ್ರ ಸಚಿವರು | ಜನತಾ ನ್ಯೂಸ್
ಮುಂಬೈ : ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸುವಂತೆ ಎಲ್ಲಾ ರಾಜ್ಯ ಸಚಿವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಕೋರಿದ್ದಾರೆ, ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಮಂಗಳವಾರ ಹೇಳಿದ್ದಾರೆ.
ಕೊರೋನಾ ಮಹಾಮಾರಿಯಿಂದ ತೀವ್ರವಾಗಿ ಪೀಡಿತ ಮಹಾರಾಷ್ಟ್ರ ರಾಜ್ಯಾದ್ಯಂತ ಎರಡನೇ ಭಾರಿಗೆ ಲಾಕ್ ಡೌನ್ ವಿಧಿಸುವ ಎಲ್ಲಾ ಸೂಚನೆಗಳನ್ನು ನೀಡಿದ ಸಚಿವ ತೋಪೆ ಅವರು, ನಾಳೆ ರಾತ್ರಿ ಅಂದರೆ ಏಪ್ರಿಲ್ 21ರಂದು 8:00 ಗಂಟೆಗೆ ರಾಜ್ಯದ ಸಿಎಂ ಉದ್ಧವ್ ಠಾಕ್ರೆ ಈ ವಿಷಯದ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ, ಎಂದು ಹೇಳಿದರು.
ನಾಳೆ ರಾತ್ರಿ 8 ಗಂಟೆಯಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸುವಂತೆ ನಾವು ಸಿಎಂಗೆ ವಿನಂತಿಸಿದ್ದೇವೆ. ಇದು ಸಿಎಂಗೆ ಎಲ್ಲಾ ಸಚಿವರ ಮನವಿ ಮಾಡಿ ಕೋರಿದ್ದಾರೆ, ಈಗ ಅದು ಅವರ ನಿರ್ಧಾರ, ಎಂದು ಟೋಪೆ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದರು. ನಾಳೆ ರಾತ್ರಿ 8 ಗಂಟೆಯ ನಂತರ, ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ನಿರ್ಧಾರವನ್ನು ಸಿಎಂ ಪ್ರಕಟಿಸುತ್ತಾರೆ, ಎಂದಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ತಡೆಯುವ ಸಲುವಾಗಿ ಮಹಾರಾಷ್ಟ್ರವು ಈಗಾಗಲೇ ಕಠಿಣ ನಿರ್ಬಂಧಗಳನ್ನು ಹೊಂದಿದೆ.
ರಾಜ್ಯದ ವ್ಯಾಕ್ಸಿನೇಷನ್ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ ಟೋಪೆ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಕಾರ್ಯಕ್ರಮದ ಬಗ್ಗೆ ಕೇಂದ್ರದಿಂದ ಯಾವುದೇ ಪತ್ರವನ್ನು ನಾವು ಇನ್ನೂ ಸ್ವೀಕರಿಸಿಲ್ಲ. ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲಾಗುವುದು ಮತ್ತು ಅಗತ್ಯವಿದ್ದರೆ ನಾವು ಕೇಂದ್ರದಿಂದ ಅನುಮತಿ ಪಡೆದು ವಿದೇಶದಿಂದ ಖರಿದಿಸುತ್ತೇವೆ, ಎಂದು ಸಿಎಂ ಹೇಳಿದ್ದಾರೆ.