ಪಿಎಂ ಕೇರ್ಸ್ ಅನುಧಾನಿತ 8 ಆಮ್ಲಜನಕ ಸ್ಥಾವರ ಸ್ಥಾಪಿಸಲು ವಿಫಲವಾದ ಕೇಜ್ರಿವಾಲ್ ಸರ್ಕಾರದ ಮೇಲೆ ಕ್ರಿಮಿನಲ್ ಪ್ರಕರಣಕ್ಕೆ ಬಿಜೆಪಿ ಒತ್ತಾಯ | ಜನತಾ ನ್ಯೂಸ್
ನವದೆಹಲಿ : ಪಿಎಂ ಕೇರ್ಸ್ ಫಂಡ್ ನಿಂದ ನವದೆಹಲಿಯಲ್ಲಿ 8 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಅನುಧಾನ ನೀಡಲಾಗಿದ್ದರೂ, ಈ ಕುರಿತು ಕೆಲಸ ಮಾಡಲು ವಿಫಲವಾಗಿದ್ದಕ್ಕಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ಕ್ರಿಮಿನಲ್ ನಿರ್ಲಕ್ಷ್ಯ ಪ್ರಕರಣ ದಾಖಲಿಸಬೇಕೆಂದು ಮತ್ತು ಕಾನೂನು ಕ್ರಮ ಜರುಗಿಸಬೇಕು, ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಒತ್ತಾಯಿಸಿದೆ.
ದೆಹಲಿ ಸರಕಾರದ ಕೆಲಸ ಮಾಡದೆ ಇರುವ ನಿಯತಿಯಿಂದ ಆಮ್ಲಜನಕ ಸರಬರಾಜಿನ ಕೊರತೆಯನ್ನು ದೆಹಲಿ ಎದುರಿಸುತ್ತಿದ್ದು, ಕೊರೋನಾ ಪೀಡಿತ ರೋಗಿಗಳು ಹಾಗೂ ದೆಹಲಿ ಜನರಿಗೆ ಎಷ್ಟು ಮಾರಕವಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ದೆಹಲಿ ಸರ್ಕಾರಕ್ಕೆ 8 ಹೊಸ ಆಮ್ಲಜನಕ ಸ್ಥಾವರ ನಿರ್ಮಿಸಲು ಮೋದಿ ಸರ್ಕಾರ ಹಣ ಪಾವತಿ ಮಾಡಿದ್ದರೂ, ದಿಲ್ಲಿ ಸರ್ಕಾರ ರಾಜ್ಯದಲ್ಲಿ ಯಾವುದೇ ಕೆಲಸ ಮಾಡಲಿಲ್ಲ. ದೆಹಲಿ ಸರಕಾರದ ಕೆಲಸ ಮಾಡದೆ ಇರುವ ನಿಯತ್ತು, ಇಂದು ದೆಹಲಿ ಜನರಿಗೆ ಎಷ್ಟು ಮಾರಕವಾಗುತ್ತಿದೆ. ದೆಹಲಿ ಸರ್ಕಾರದ ಎಷ್ಟೊಂದು ದೊಡ್ಡ ಬೇಜವಾಬ್ದಾರಿತನಕ್ಕೆ ಯಾವುದೇ ಶಿಕ್ಷೆ ಸಿಗಬಾರದೇ? ಎಂದು ಬಿಜೆಪಿ ದೆಹಲಿ ಪ್ರದೇಶ ಅಧ್ಯಕ್ಷ ಆದೇಶ ಗುಪ್ತಾ ಪ್ರಶ್ನಿಸಿದ್ದಾರೆ.