ಕೊರೋನಾದಿಂದಾಗಿ 22 ವರ್ಷ ಬಳಿಕ ಒಂದಾದ ತಾಯಿ, ಮಗ! | ಜನತಾ ನ್ಯೂಸ್
ಹಾಸನ : 22 ವರ್ಷಗಳ ಹಿಂದೆ ಅಪ್ಪ-ಅಮ್ಮನನ್ನು ತೊರೆದು ಹೋಗಿದ್ದ ಯುವಕನೋರ್ವ ಇದೀಗ ಕೊರೋನಾ ಕಾರಣದಿಂದಾಗಿ ವಾಪಸ್ ಬಂದು ಮನೆ ಸೇರಿದ್ದಾನೆ.
ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಹೊಂಗೆರೆ ಗ್ರಾಮದ ರಾಜೇಗೌಡ ಹಾಗೂ ಅಕ್ಕಯಮ್ಮ ದಂಪತಿ ಮಗನಾದ 38 ವರ್ಷದ ಶೇಖರ್ ಕೊರೋನಾದಿಂದಾಗಿ ಇದೀಗ ಪೋಷಕರನ್ನು ಸೇರಿರುವ ಯುವಕ.
16ನೇ ವಯಸ್ಸಿನಲ್ಲೇ ಅಪ್ಪ-ಅಮ್ಮನ್ನು ತೊರೆದು ಊರೂರು ಸುತ್ತಿದ್ದ. 16ನೇ ವಯಸ್ಸಿನಲ್ಲಿದ್ದಾಗ ಓದು ತಲೆಗೆ ಹತ್ತಲಿಲ್ಲ. ಹಾಗಾಗಿ ಬೇಸರಗೊಂಡು ಮುಂಬೈ ಬಸ್ ಹತ್ತಿದ್ದಾರೆ. ನಂತರ ಅಲ್ಲಿ ಇಲ್ಲಿ ಹೋಟೆಲ್ಗಳಲ್ಲಿ ಕೆಲಸ ಮಾಡಿಕೊಂಡು ದಿನ ದೂಡುತ್ತಿದ್ದರು. ನಂತರ ಅಷ್ಟೂ ಇಷ್ಟೂಅಡುಗೆ ಕೆಲಸ ಕಲಿತುಕೊಂಡರು. ನಂತರದ ದಿನಗಳಲ್ಲಿ ದುಬೈನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ದುಬೈಗೆ ಹೋಗಿ ಅಲ್ಲಿಯೂ ಒಂದಷ್ಟುಕಾಲ ಕೆಲಸ ಮಾಡಿದ್ದರು. ಆದರೆ, ಕಳೆದ ವರ್ಷ ಕೋವಿಡ್ ಬಂದ ನಂತರದಲ್ಲಿ ಅಲ್ಲಿಯೂ ಕೆಲಸ ಹೋಗಿದ್ದರಿಂದ ವಾಪಸ್ ಮುಂಬೈಗೆ ವಾಪಸಾದರು.
ದುಬೈನಿಂದ ಬಂದ ನಂತರದಲ್ಲಿ ತಾನು ಸಂಪಾದಿಸಿದ್ದ ಹಣ ಹೂಡಿಕೆ ಮಾಡಿ ತಾನೇ ಒಂದು ಹೋಟೆಲ್ ತೆರೆದಿದ್ದೆ. ಹಾಗೋ ಹೀಗೋ ನಡೆಯುತ್ತಿತ್ತು. ಆದರೆ, ನಂತರದಲ್ಲಿ ಸ್ನೇಹಿತರಿಂದ ಆದ ಮೋಸ ಹಾಗೂ ಇದೀಗ ಮತ್ತೆ ಕಾಣಿಸಿಕೊಂಡ ಕೊರೋನಾದಿಂದಾಗಿ ಹೋಟೆಲ್ ಮುಚ್ಚಬೇಕಾಯಿತು. ಇದರಿಂದ ತೀವ್ರ ನಷ್ಟಅನುಭವಿಸಿದೆ.
ಹಿಂದೊಮ್ಮೆ ಅಪ್ಪ-ಅಮ್ಮನನ್ನು ಭೇಟಿ ಮಾಡಬೇಕೆಂದು ಹಾಸನಕ್ಕೆ ಬಂದಿದ್ದೆ. ಊರು ಬಿಟ್ಟುಹೋಗಿ ನಷ್ಟ ಅನುಭವಿಸಿದ್ದರಿಂದ ವಾಪಸ್ ಬರುವುದು ಹೇಗೆಂದು ವಾಪಸ್ ಊರಿಗೆ ಬರಲು ಮಗ ಶೇಖರ್ ಹಿಂಜರಿದು ಇದೀಗ 22 ವರ್ಷಗಳ ಬಳಿಕ ಹಾಸನಕ್ಕೆ ಮರಳಿಸಿದ್ದಾರೆ.