ಕೋವಿಡ್-19 ಎರಡನೇ ಅಲೆ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವರ ಸಭೆ | ಜನತಾ ನ್ಯೂಸ್
ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶುಕ್ರವಾರ ನಡೆದ ಕೇಂದ್ರ ಸಚಿವರ ಸಭೆಯ ಅಧ್ಯಕ್ಷತೆ ವಹಿಸಿದರು. ಇಂದು ಮಧ್ಯಾಹ್ನ ನಡೆದ ಈ ಸಭೆ ದೇಶದಲ್ಲಿ ಕೊರೊನಾವೈರಸ್ನ ಎರಡನೇ ತರಂಗ ನಂತರ ನಡೆಯುವ ಮೊದಲನೆ ಕೇಂದ್ರ ಸಚಿವರ ಸಭೆಯಾಗಿದೆ.
ಕೇಂದ್ರ ಸಚಿವರೊಂದಿಗಿನ ಇಂದಿನ ವರ್ಚುವಲ್ ಸಭೆಯಲ್ಲಿ ಸಾಂಕ್ರಾಮಿಕ ಮತ್ತು ಈ ಕುರಿತು ಸರ್ಕಾರದ ಪ್ರತಿಕ್ರಿಯೆ ಕುರಿತು ಚರ್ಚಿಸಲಾಗಿದೆ, ಎಂದು ಮೂಲಗಳನ್ನು ಉಲ್ಲೇಖಿಸಿದೆ. ಈಗ ನಡೆಯುತ್ತಿರುವ ಲಸಿಕಾ ಅಭಿಯಾನ(ವ್ಯಾಕ್ಸಿನೇಷನ್ ಡ್ರೈವ್) ವನ್ನು ಮೇ 1 ರಿಂದ 18-45 ವಯಸ್ಸಿನವರಿಗೆ ತೆರೆಯಲಾಗುವುದನ್ನು ಸಹ ಚರ್ಚಿಸಲಾಗಿದೆ.
ಕೋವಿಡ್-19 ಪರಿಸ್ಥಿತಿಯ ನಿರ್ವಹಣೆ ಹಾಗೂ ನಿಯಂತ್ರಣದ ಉದ್ದೇಶಗಳೊಂದಿಗೆ ಪ್ರಧಾನಿ ಮೋದಿಯವರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸರ್ಕಾರಿ ಉನ್ನತ ಅಧಿಕಾರಿಗಳೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ.
ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸಬೇಕು, ಎಂದು ಚರ್ಚಿಸಲು ಅವರು ಔಷಧ ಉದ್ಯಮದ ಮುಖಂಡರು, ಆಮ್ಲಜನಕ ಪೂರೈಕೆದಾರರು, ಪ್ರಖ್ಯಾತ ವೈದ್ಯರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು, ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು ಮತ್ತು ಇತರ ಗಣ್ಯರೊಂದಿಗೆ ಈಗಾಗಲೇ ಸಭೆ ನಡೆಸುತ್ತಿದ್ದಾರೆ.