ಲಸಿಕೆ ಇನ್ನು ಬಂದಿಲ್ಲ, ಬಂದ ತಕ್ಷಣ ಕೊಡುತ್ತೇವೆ: ಸಿಎಂ ಯಡಿಯೂರಪ್ಪ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಲಸಿಕೆ ಕೇಂದ್ರ ಸರ್ಕಾರ ಘೋಷಣೆ ಮಾಡಿದಂತೆ 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದ ಆರಂಭವಾಗಬೇಕಿತ್ತು. ಆದ್ರೇ ಲಸಿಕೆ ಪೂರೈಕೆ ಆಗದ ಕಾರಣದಿಂದಾಗಿ ನಾಳೆಯಿಂದ 18 ರಿಂದ 44 ವರ್ಷದವರೆಗಿನ ಜನರಿಗೆ ಕೊರೋನಾ ಲಸಿಕೆ ಸಿಗೋದು ಡೌಟ್ ಎಂದು ಹೇಳಲಾಗುತ್ತಿತ್ತು.
ಈ ಕುರಿತಂತೆ ಸಿಎಂ ಯಡಿಯೂರಪ್ಪ ಮಾತನಾಡಿ, ನಾಳೆಯಿಂದ ಕೊರೋನಾ ಲಸಿಕೆ ಸಿಕ್ಕಿದ್ದರೇ ಲಸಿಕೆ ನೀಡಿಕೆ ಆರಂಭವಾಗುತ್ತಿತ್ತು. ಆದರೆ ಲಸಿಕೆ ಸಿಗೋದು ವಿಳಂಬ ಆಗಿರುವ ಕಾರಣ ಲಸಿಕೆ ನೀಡೋದಕ್ಕೆ ಆಗ್ತಾ ಇಲ್ಲ ಎಂದರು.
ಲಸಿಕೆ ವಿಳಂಬವಾಗಿದೆ ಎನ್ನುವ ಮಾತ್ರಕ್ಕೆ ವೈಫಲ್ಯ ಎನ್ನುವ ಪ್ರಶ್ನೆ ಬರುವುದಿಲ್ಲ. ಲಸಿಕೆ ಬಂದ ತಕ್ಷಣ 18 -45 ವರ್ಷ ಒಳಗಿನವರಿಗೆ ಕೊಡಲಾಗುವುದು. ಈ ವಿಚಾರದಲ್ಲಿ ಪ್ರಧಾನಿ ಅವರನ್ನ ಮಧ್ಯೆ ತರಬೇಡಿ. ಕೇಂದ್ರ ಸರ್ಕಾರ ಲಸಿಕೆ ನೀಡಲು ಎಲ್ಲಾ ಪ್ರಯತ್ನ ಮಾಡುತ್ತಾ ಇದೆ ಎಂದರು. ಮೂರನೇ ಹಂತದ ಲಸಿಕೆ ಅಭಿಯಾನಕ್ಕೆ ವ್ಯವಸ್ಥಿತವಾಗಿ ತಯಾರಿ ಮಾಡಿಕೊಳ್ಳಲಾಗಿದೆ. ಈಗ ಲಭ್ಯತೆ ಇಲ್ಲದ ಕಾರಣ ಮುಂದೂಡಲಾಗಿದೆ. ಲಸಿಕೆ ಬಂದಾಕ್ಷಣ ಎಲ್ಲರಿಗೂ ಸುಗಮವಾಗಿ ಲಸಿಕೆ ತಲುಪುವಂತೆ ಶಿಸ್ತುಬದ್ಧ ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಣೆ ಮೂಲಕ ಕೂಡ ತಿಳಿಸಲಾಗಿದೆ.