ಬಹ್ರೇನ್, ಬ್ಯಾಂಕಾಕ್, ಸಿಂಗಾಪುರದಿಂದ ಆಮ್ಲಜನಕ ಸಾಗಣೆ : ಭಾರತೀಯ ನೌಕಾಪಡೆಯಿಂದ ಆಪರೇಷನ್ ಸಮುದ್ರ ಸೆತು-2 | ಜನತಾ ನ್ಯೂಸ್
ನವದೆಹಲಿ : ಮಹಾರಾಷ್ಟ್ರವೂ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ನೀಗಿಸಲು ಭಾರತೀಯ ನೌಕಾಪಡೆ ಮಿತ್ರರಾಷ್ಟ್ರಗಳಿಂದ ಆಮ್ಲಜನಕದ ಕಂಟೇನರ್ ಸಂಗ್ರಹಿಸುವ ಕಾರ್ಯಾಚರಣೆ ಮುಂದುವರೆಸಿದೆ.
ಈ ಕುರಿತು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದು, ಭಾರತೀಯ ನೌಕಾಪಡೆ ಆಮ್ಲಜನಕದ ಅವಶ್ಯಕತೆಗಳನ್ನು ಪೂರೈಸಲು ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಾಚರಣೆಯನ್ನು ಹೆಚ್ಚಿಸಲು, ಆಪರೇಷನ್ ಸಮುದ್ರ ಸೆತು-2 ವನ್ನು ಪ್ರಾರಂಭಿಸಿದೆ, ಎಂದಿದ್ದಾರೆ.
ಕೋವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಭಾರತೀಯ ನೌಕಾ ಹಡಗುಗಳು ಆಮ್ಲಜನಕ ತುಂಬಿದ ಕಂಟೇನರ್ ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳ ಸಾಗಣೆಯನ್ನು ಕೈಗೊಳ್ಳಲಿವೆ.
ಐಎನ್ಎಸ್ ಕೋಲ್ಕತಾ ಮತ್ತು ಐಎನ್ಎಸ್ ತಲ್ವಾರ್ ಎಂಬ ಎರಡು ಹಡಗುಗಳು 40 ಮೆಟ್ರಿಕ್ ಟನ್ ದ್ರವ ಆಮ್ಲಜನಕವನ್ನು ಸಂಗ್ರಹಿಸಿ, ಮುಂಬೈಗೆ ಸಾಗಿಸಲು ಬಹ್ರೇನ್ನ ಮನಮಾ ಬಂದರಿಗೆ ಪ್ರವೇಶಿಸಿವೆ.
ಐಎನ್ಎಸ್ ಜಲಶ್ವಾ ಬ್ಯಾಂಕಾಕ್ಗೆ ಮತ್ತು ಐಎನ್ಎಸ್ ಐರಾವತ್ ಸಿಂಗಾಪುರಕ್ಕೆ ಇದೇ ರೀತಿಯ ಕಾರ್ಯಚರಣೆಗಳಿಗಾಗಿ ಹೊರಟಿದೆ.