ದೆಹಲಿಗೆ ಪ.ಬಂ. ಮುಖಾಂತರ ಆಕ್ಸಿಜನ್ ಎಕ್ಸ್ಪ್ರೆಸ್ನಲ್ಲಿ ಸಿಂಗಾಪುರದಿಂದ ತಂದ ಆಮ್ಲಜನಕ ಕಂಟೇನರ್ | ಜನತಾ ನ್ಯೂಸ್
ಕೊಲ್ಕೊತ್ತಾ : ಸಿಂಗಾಪುರದಿಂದ ಭಾರತೀಯ ವಾಯುಪಡೆ(ಐಎಎಫ್) ವಿಮಾನದಲ್ಲಿ ತರಲಾಗಿದ್ದ ಕ್ರೈಯೊಜೆನಿಕ್ ಆಕ್ಸಿಜನ್ ಕಂಟೇನರ್ ಗಳನ್ನು ಪಶ್ಚಿಮ ಬಂಗಾಳದ ದುರ್ಗಾಪುರದಿಂದ ಆಕ್ಸಿಜನ್ ಎಕ್ಸ್ಪ್ರೆಸ್ನಲ್ಲಿ ದೆಹಲಿಗೆ ಸಾಗಿಸಲಾಗಿದೆ.
ಕೋವಿಡ್ -19 ಪ್ರಕರಣಗಳ ಹೆಚ್ಚಳದ ಮಧ್ಯೆ ಭಾರತೀಯ ವಾಯುಸೇನೆಯ ಸಿ-17 ವಿಮಾನವು ಸಿಂಗಾಪುರದಿಂದ ಪಶ್ಚಿಮ ಬಂಗಾಳದ ಪನಗಡದ ವಾಯುನೆಲೆಗೆ 8 ಕ್ರೈಯೊಜೆನಿಕ್ ಆಮ್ಲಜನಕ ಕಂಟೇನರ್ ಗಳನ್ನು ಶುಕ್ರವಾರ ಹೊತ್ತು ತಂದಿತ್ತು.
ಇದಕ್ಕೂ ಮೊದಲು, ಎರಡು ಸಿ-17 ವಿಮಾನಗಳು ಸಿಂಗಾಪುರದಿಂದ ಪನಗಡಕ್ಕೆ ಎಂಟು ಆಮ್ಲಜನಕ ಟ್ಯಾಂಕರ್ಗಳೊಂದಿಗೆ ಹಾರಾಟ ನಡೆಸುತ್ತಿವೆ. ಕಾರ್ಯವು ಪ್ರಗತಿಯಲ್ಲಿದೆ, ಎಂದು ಐಎಎಫ್ ಹೇಳಿಕೆಯಲ್ಲಿ ತಿಳಿಸಲಾಗಿತ್ತು.
ಪಶ್ಚಿಮ ಬಂಗಾಳದ ದುರ್ಗಾಪುರದಿಂದ ಆಮ್ಲಜನಕವನ್ನು ಸಾಗಿಸಲು ದೆಹಲಿಗೆ ಎರಡನೇ ಆಕ್ಸಿಜನ್ ಎಕ್ಸ್ಪ್ರೆಸ್. ಕ್ರೈಯೊಜೆನಿಕ್ ಆಕ್ಸಿಜನ್ ಕಂಟೇನರ್ ಗಳನ್ನು ಸಿಂಗಾಪುರದಿಂದ ಐಎಎಫ್ ವಿಮಾನದಲ್ಲಿ ಸಾಗಿಸಲಾಯಿತು. ಪಶ್ಚಿಮ ಬಂಗಾಳದ ದುರ್ಗಾಪುರದಿಂದ ದೆಹಲಿಗೆ ತೆರಳುವ ಆಕ್ಸಿಜನ್ ಎಕ್ಸ್ಪ್ರೆಸ್ನಲ್ಲಿ ಲೋಡ್ ಮಾಡಲಾಗುತ್ತಿದೆ. ಈ ನಿರಂತರ ಕಾರ್ಯಾಚರಣೆಗಳು ದೇಶಾದ್ಯಂತ COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ದ್ರವ ವೈದ್ಯಕೀಯ ಆಮ್ಲಜನಕದ ವಿತರಣೆಯನ್ನು ವೇಗಗೊಳಿಸುತ್ತದೆ, ಕೇಂದ್ರ ರೇಲ್ವೆ ಮಂತ್ರಿ ಪಿಯುಷ್ ಗೋಯಲ್ ಹೇಳಿದ್ದಾರೆ.