ರಾಜ್ಯಾದ್ಯಂತ 271 ಸಾವು : ಹೊಸ ಕೋವಿಡ್-19 ಪ್ರಕರಣ 40,990 ಬೆಂಗಳೂರಿನಲ್ಲಿ 19,353 | ಜನತಾ ನ್ಯೂಸ್
ಬೆಂಗಳೂರು : ರಾಜ್ಯಾದ್ಯಂತ ಇಂದು ಕೋವಿಡ್-19 ಪ್ರಕರಣಗಳು ನಿಯಂತ್ರಣ ರಹಿತವಾಗಿ ಅಪಾಯಕರ ರೀತಿಯಲ್ಲಿ ಏರಿಕೆ ಕಾಣುತ್ತಿದ್ದು ಅರ್ಧ ಲಕ್ಷದ ಸಮೀಪ ತಲುಪಿದೆ. ಎಪ್ರಿಲ್ ಕೊನೆಯ ದಿನವಾದ ಇಂದು ರಾಜ್ಯದಲ್ಲಿ 40,990 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದರಲ್ಲಿ ಹೆಚ್ಚಿನ ಪಾಲು ಹೊಂದಿರುವ ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರಕರಣಗಳ ಸಂಖ್ಯೆ 19,353 ಸಂಖ್ಯೆ ದಾಖಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 940 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಹಾಗೆಯೆ, ಪ್ರಕರಣಗಳ ಸಂಖ್ಯೆ ಶತಕ ದಾಟಿದ ಜಿಲ್ಲೆಗಳೆಂದರೆ ಕುಲಬುರಗಿಯಲ್ಲಿ 1407, ಮೈಸೂರು ನಲ್ಲಿ 2529, ಬೀದರ್ ನಲ್ಲಿ 360, ದಕ್ಷಿಣ ಕನ್ನಡದಲ್ಲಿ 933, ಹಾಸನದಲ್ಲಿ 790, ತುಮಕೂರುನಲ್ಲಿ 2308, ಬಳ್ಳಾರಿ 1163, ಮಂಡ್ಯದಲ್ಲಿ 1235, ಧಾರವಾಡದಲ್ಲಿ 540, ವಿಜಯಪುರದಲ್ಲಿ 340, ಶಿವಮೊಗ್ಗದಲ್ಲಿ 661, ಬೆಳಗಾವಿಯಲ್ಲಿ 532, ಚಿಕ್ಕಬಳ್ಳಾಪುರದಲ್ಲಿ 820, ದಾವಣಗೆರೆಯಲ್ಲಿ 386, ಕೋಲಾರದಲ್ಲಿ 440, ಚಾಮರಾಜನಗರದಲ್ಲಿ 548, ಕೊಡಗುನಲ್ಲಿ 590, ಕೊಪ್ಪಳದಲ್ಲಿ 1019, ಉಡುಪಿಯಲ್ಲಿ 670, ರಾಮನಗರದಲ್ಲಿ 577 ಹಾಗೂ ಉತ್ತರ ಕನ್ನಡ 687 ಪ್ರಕರಣ ದಾಖಲಾಗಿದೆ.
ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 15,64,132ಕ್ಕೆ ಏರಿಕೆಯಾಗಿವೆ. ಕಳೆದ 24 ಗಂಟೆಯಲ್ಲಿ 271 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಕರಣಗಳಲ್ಲಿ, ಬೆಂಗಳೂರು ನಗರದಲ್ಲಿ 7,256 ಜನ ಕೋವಿಡ್-19 ನಿಂದ ಗುಣಮುಖರಾಗಿದ್ದು ಸೇರಿದಂತೆ ರಾಜ್ಯಾಧ್ಯಂತ ಇಂದು 18,341 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 11,43,250 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ ರಾಜ್ಯಾದ್ಯಂತ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು ದಾಖಲಾದ 271 ಸಾವುಗಳಲ್ಲಿ, ಬೆಂಗಳೂರು ನಗರದಲ್ಲಿ 162 ಸಾವು ಸಂಭವಿಸಿದೆ ಹಾಗೂ ರಾಜ್ಯಾದ್ಯಂತ ಒಟ್ಟು ಕೋವಿಡ್ ಸಾವಿನ ಸಂಖ್ಯೆ 15,794 ಆಗಿದೆ.