ಜಗಳ ಬಿಡಿಸಲು ಹೋದ ಅಮಾಯಕ ಯುವಕನಿಗೇ ಚೂರಿ ಇರಿದು ಕೊಲೆ! | ಜನತಾ ನ್ಯೂಸ್
ಉತ್ತರಕನ್ನಡ : ನಗರದ ಗಾಂಧಿ ನಗರದಲ್ಲಿ ಭಾನುವಾರ ತಡರಾತ್ರಿ, ಮೂವರ ಮಧ್ಯೆ ನಡೆಯುತ್ತಿದ್ದ ಹೊಡೆದಾಟ ಬಿಡಿಸಲು ಹೋದ ಯುವಕನನ್ನೇ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.
ಸಂದೀಪ ಪ್ರಕಾಶ ಪಾಟೀಲ್ (22) ಕೊಲೆಯಾದ ಯುವಕ. ಮೃತ ಯುವಕ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಊರಿಗೆ ಬಂದಿದ್ದಾಗ ಈ ಕೃತ್ಯ ನಡೆದಿದೆ. ಮೃತನ ಸಹೋದರ ಮನೋಜ ಪಾಟೀಲ್ ಮೇಲೆ ಫಾರೂಕ್, ಕಾರ್ತಿ ಸೇರಿ ಇತರರು ಕ್ಷುಲ್ಲಕ ಕಾರಣಕ್ಕೆ ಜಗಳಕ್ಕೆ ಇಳಿದಿದ್ದರು. ಅಲ್ಲದೆ, ಮನೋಜ್ ಮೇಲೆ ಹಲ್ಲೆಯನ್ನು ಮಾಡಿದ್ದಾರೆ.
ಈ ವೇಳೆ ಹಲ್ಲೆ ತಪ್ಪಿಸಲು ಹೋಗಿದಕ್ಕೆ ಸಂದೀಪ್ನನ್ನು ಹೊಡೆದು ಚಾಕು ಇರಿದು ಕೊಲೆ ಮಾಡಲಾಗಿದೆ. ಈ ಸಂಬಂಧ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.