ದೆಹಲಿ ಕಳ್ಳ ಮಾರುಕಟ್ಟೆ : ಸುಮಾರು 100 ಆಮ್ಲಜನಕ ಸಾಂದ್ರಕ(ಕಾಂಸೆನ್ಟ್ರೇತರ್) ವಶಪಡಿಸಿಕೊಂಡ ಪೊಲೀಸರು | ಜನತಾ ನ್ಯೂಸ್
ನವದೆಹಲಿ : ನಗರದ ಪ್ರಸಿದ್ಧ ಖಾನ್ ಮಾರುಕಟ್ಟೆಯಲ್ಲಿನ ಜನಪ್ರಿಯ ಆಹಾರ ಮಳಿಗೆಯ ಮೇಲೆ ದೆಹಲಿ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ. ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಬಳಸಲಾದ ಹಾಗೂ ಸುಮಾರು 100 ಜೀವರಕ್ಷಕ ಆಮ್ಲಜನಕ ಸಾಂದ್ರಕಗಳನ್ನು ವಶಪಡಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚದಂತೆ ಆಮ್ಲಜನಕ ಸಾಂದ್ರಕಗಳ ಬೇಡಿಕೆ ಹಾಗೂ ಬೆಲೆ ಕಳ್ಳಸಂತೆಯಲ್ಲಿ ಗಗನ ಮುಟ್ಟುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರಿಂದ ನವದೆಹಲಿಯ ಅತ್ಯಂತ ಐಷಾರಾಮಿ ಮತ್ತು ದುಬಾರಿ ಖಾನ್ ಮಾರುಕಟ್ಟೆಯ ಖಾನ್ ಚಾಚಾ ರೆಸ್ಟೋರೆಂಟ್ನಿಂದ 96 ಆಮ್ಲಜನಕ ಸಾಂದ್ರಕ(ಕಾಂಸೆನ್ಟ್ರೇತರ್)ಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ರೆಸ್ಟೋರೆಂಟ್ಗೆ ಮೊಹರು ಹಾಕಿದ್ದಾರೆ. ಸುಮಾರು 30ಕ್ಕೂ ಹೆಚ್ಚಿನ ಕಡೆ ಶೋಧ ಕಾರ್ಯಚರಣೆಗೆ ದಾಳಿಗಳು ನಡೆಯುತ್ತಿವೆ, ಎನ್ನಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಖಾನ್ ಮಾರ್ಕೆಟ್ ನಲ್ಲಿರುವ ಖಾನ್ ಚಾಚಾ ಮಳಿಗೆಯಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಅಕ್ರಮವಾಗಿ ಶೇಖರಿಸಿದ್ದು ಬೆಳಕಿಗೆ ಬಂದ ಬಳಿಕ ದೆಹಲಿ ಪೊಲೀಸರು ಮಳಿಗೆಯನ್ನು ಸೀಲ್ ಮಾಡಿದ್ದಾರೆ. ಈ ಸಾಂದ್ರಕಗಳನ್ನು ಕಳ್ಳ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.