ಜ್ಯೋತಿಷಿ ಮಾತು ಕೇಳಿ ತಂದೆ, ತಾಯಿಯನ್ನು ಕೊಂದ 14 ವರ್ಷದ ಮಗ ಅರೆಸ್ಟ್ | ಜನತಾ ನ್ಯೂಸ್
ಬೆಂಗಳೂರು : ಜೋತಿಷಿ ಮಾತು ಕೇಳಿ ತಂದೆ -ತಾಯಿಯನ್ನು ತಡ ರಾತ್ರಿ ಮೂರು ಗಂಟೆಗೆ ಕಲ್ಲಿನಿಂದ ಜಜ್ಜಿ ಸಾಯಿಸಿದ ಘಟನೆ ಬೆಂಗಳೂರಿನ ಪೀಣ್ಯದ ಕರಹೋಬನಹಳ್ಳಿಯಲ್ಲಿ ನಡೆದಿದೆ.
ಆರಂಭದಲ್ಲಿ ಹನುಮಂತರಾಯ ಹಾಗೂ ಹೊನ್ನಮ್ಮ ಅವರ ಇಬ್ಬರು ಪುತ್ರರನ್ನು ವಶಕ್ಕೆ ಪಡೆದು, ತೀವ್ರವಾಗಿ ತನಿಖೆ ನಡೆಸಿದಂತ ವೇಳೆಯಲ್ಲಿ, ಅವರ 14 ವರ್ಷದ ಮಗ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ನಕಲಿ ಜ್ಯೋತಿಷಿಯೊಬ್ಬ ನಿನಗೆ ಪಿತೃ ದೋಷವಿದೆ. ಅದು ನಿವಾರಣೆ ಆಗಬೇಕಾದ್ರೇ.. ತಂದೆ-ತಾಯಿಗಳನ್ನು ಹತ್ಯೆ ಮಾಡಬೇಕು ಎಂಬುದಾಗಿ ಹೇಳಿದ್ದರಂತೆ.
ಗಾಂಜಾ ಮತ್ತಲ್ಲಿ ಪೋಷಕರನ್ನು ರಾಕ್ಷಸನಂತೆ ಕೊಂದ ಎರಡನೇ ಮಗ ಕೊಲೆ ಮಾಡಿದ ಬಳಿಕ ತಾನೇ ಕಚೇರಿಯ ಬೀಗ ಹಾಕಿ, ಕೀ ತನ್ನ ಪ್ಯಾಂಟ್ವೊಂದರಲ್ಲಿ ಬಚ್ಚಿಟ್ಟಿದ್ದ. ಬೆಳಿಗ್ಗೆ ತಂದೆ-ತಾಯಿ ಕಾಣದಾಗ ಪೀಣ್ಯ ಪೊಲೀಸರಿಗೆ ಮೊದಲನೇ ಮಗ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರಿಗೆ ವಿಚಾರಣೆ ವೇಳೆ ಕಚೇರಿಯ ಕೀ ಸಿಕ್ಕಿದ್ದು, ಇದು ಕೊಲೆಯ ಸುಳಿವು ನೀಡಿದೆ. ಸದ್ಯ14 ವರ್ಷದ ಎರಡನೇ ಮಗನನ್ನು ಬಂಧಿಸಿದ ಪೀಣ್ಯ ಪೊಲೀಸರು ಈ ಘಟನೆಗೆ ಮೂಲಕ ಕಾರಣವಾದ ಜ್ಯೋತಿಷಿಯನ್ನು ವಶಕ್ಕೆ ಪಡೆದಿದ್ದಾರೆ.