ತಾಯಿ ತೀರಿಕೊಂಡ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ! | ಜನತಾ ನ್ಯೂಸ್
ಧಾರವಾಡ : ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿಯಾದ ಘಟನೆ ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ. ತಾಯಿ ತೀರಿಕೊಂಡ ಮೂರೇ ದಿನಕ್ಕೆ ಅಣ್ಣ, ತಮ್ಮ, ಈ ಕುಟುಂಬದಲ್ಲಿ ಮೂವರು ಕೋವಿಡ್-19 ಸೋಂಕಿಗೆ ಬಲಿಯಾದಂತಾಗಿದೆ.
ಮೂರು ದಿನಗಳ ಹಿಂದೆ ಶಾಂತಮ್ಮ ಕಡ್ಲಿ (75) ಕೊರೊನಾದಿಂದಾಗಿ ಮೃತಪಟ್ಟಿದ್ದರು. ಇಂದು ಅವರ ಇಬ್ಬರು ಪುತ್ರರಾದ ಕಲ್ಲಪ್ಪ ಕಡ್ಲಿ (49), ನಾಗನಗೌಡ ಕಡ್ಲಿ (42) ಕೂಡ ಕೊರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ.
ಈ ಇಬ್ಬರು ಸಹೋದರರು ವಾಕರಸಾ ಸಂಸ್ಥೆಯ ಧಾರವಾಡ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
RELATED TOPICS:
English summary :Dharwad