ಕನ್ನಡದಲ್ಲಿ ಸೂಪರ್ ಹಿಟ್ ಹಾಡುಗಳನ್ನು ಬರೆದ ಖ್ಯಾತ ಸಾಹಿತಿ ಶ್ರೀರಂಗ ನಿಧನ! | ಜನತಾ ನ್ಯೂಸ್
ಬೆಂಗಳೂರು : ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು ಬರೆದಿರುವ ಗೀತೆಗಳ ಸಾಹಿತಿ ಇನ್ನಿಲ್ಲ.
ಶ್ರೀರಂಗ (86 ) ಅವರು ಬೆಂಗಳೂರಿನ ನಾಗರಬಾವಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಮಾರು 1000ಕ್ಕೂ ಹೆಚ್ಚು ಚಿತ್ರಗೀತೆಗಳನ್ನ ರಚಿಸಿದ ಹೆಚ್ಚುಗಾರಿಕೆ ಶ್ರೀರಂಗ ಅವರದ್ದಾಗಿದೆ.
ನಂಜುಂಡಿ ಕಲ್ಯಾಣ, ಆಸೆಗೊಬ್ಬ ಮೀಸೆಗೊಬ್ಬ, ಜನುಮದ ಜೋಡಿ, ರಕ್ತ ಕಣ್ಣೀರು ಸೇರಿದಂತೆ ಹಲವು ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ಬರೆದಿದ್ದಾರೆ. ಅಂಜದ ಗಂಡು, ಕಿಂದರಿ ಜೋಗಿ, ಮುತ್ತೈದೆ ಭಾಗ್ಯ, ಭೂಲೋಕದಲ್ಲಿ ಯಮ ರಾಜ ಸೇರಿದಂತೆ ಹಲವು ಚಿತ್ರಗಳಿಗೆ ಸಂಭಾಷಣೆ ಸಹಬರೆದಿದ್ದರು.
ಇಂದು ಕೆಂಗೇರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಶ್ರೀರಂಗ ಅವರ ಪತ್ನಿ ಸರೋಜಮ್ಮ ಮಾಹಿತಿ ನೀಡಿದ್ದಾರೆ.