ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕರ | ಜನತಾ ನ್ಯೂಸ್
ದಿಸ್ಪುರ್ : ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಇಂದು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಾರಂಭದಲ್ಲಿ ರಾಜ್ಯಪಾಲ ಜಗದೀಶ್ ಮುಖಿ ನೂತನ ಸಿಎಂ ಅವರಿಗೆ ಪ್ರಮಾಣ ವಚನ ಭೋಧಿಸಿದರು.
ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಮತ್ತು ರಮೇಶ್ ತೆಲಿ, ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫು ರಿಯೊ ಮತ್ತು ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ರಿಪುನ್ ಬೋರಾ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಟ್ಟುನಿಟ್ಟಾದ ಕೋವಿಡ್-19 ನಿಯಮಾವಳಿಗಳ ನಡುವೆ ಅಸ್ಸಾಮೀಸ್ನಲ್ಲಿ ಪ್ರಮಾಣವಚನ ಮತ್ತು ಗೌಪ್ಯತೆಯನ್ನು ಸ್ವೀಕರಿಸಿದ ಶರ್ಮಾ ಅವರು ಸಾಂಪ್ರದಾಯಿಕ ರೇಷ್ಮೆ ಧೋತಿ ಮತ್ತು ಕುರ್ತಾ ಧರಿಸಿ ಕುತ್ತಿಗೆಗೆ ಮುಗಾ ಗಮೋಸಾ ಧರಿಸಿದ್ದರು. ಅವರೊಂದಿಗೆ, ಇತರ 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸಮಾರಂಭದ ನಂತರ, ಐದು ವರ್ಷಗಳಲ್ಲಿ ಅಸ್ಸಾಂ ಅನ್ನು ಭಾರತದ ಅಗ್ರ ಐದು ರಾಜ್ಯಗಳಲ್ಲಿ ಒಂದನ್ನಾಗಿ ಮಾಡುವ ಗುರಿ ಹೊಂದಿದ್ದೇನೆ, ಎಂದು ಶರ್ಮಾ ಹೇಳಿದರು. ಹಿಂಸಾಚಾರವನ್ನು ತಪ್ಪಿಸಲು, ಮಾತುಕತೆ ನಡೆಸಲು ಮೇಜಿಗೆ ಬನ್ನಿ ಎಂದು ಅವರು ಉಲ್ಫಾ(ಐ) ಮುಖ್ಯಸ್ಥ ಪರೇಶ್ ಬರುವಾ ಅವರಿಗೆ ಮನವಿ ಮಾಡಿದರು.
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಸೋನೊವಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರಲಿಲ್ಲ, ಅಷ್ಟಲ್ಲದೇ ಸೋನೊವಾಲ್ ಅವರು ಪಕ್ಷದ ಮುಖ ಎಂಬುದನ್ನು ನಿರಾಕರಿಸುವ ಮಟ್ಟಕ್ಕೆ ಹೋಗಿದ್ದರು. ರಾಜ್ಯದ ಉನ್ನತ ಸ್ಥಾನದ ಕುರಿತು ಸೋನೊವಾಲ್ ಮತ್ತು ಶರ್ಮಾ ನಡುವೆ ಹಗ್ಗಜಗ್ಗಾಟ ಆರಂಭಗೊಂಡಿದೆ ಎಂದು ಇದು ಸಾಕಷ್ಟು ಸ್ಪಷ್ಟಪಡಿಸಿತ್ತು.