ಆ್ಯಂಬುಲೆನ್ಸ್ ಸಿಗದೇ ಬೆಂಗಳೂರಿನಂದ ಮಂಡ್ಯ ತನಕ ಎದೆಗೆ ಮಲಗಿಸಿಕೊಂಡು ತಾಯಿಯ ಮೃತದೇಹ ಆಟೋದಲ್ಲಿ ಸಾಗಿಸಿದ ಮಗ! | ಜನತಾ ನ್ಯೂಸ್
ಬೆಂಗಳೂರು : ಆ್ಯಂಬುಲೆನ್ಸ್ ಸಿಗದೆ ಮಹಿಳೆಯ ಮೃತದೇಹವನ್ನು ಆಟೋ ಮೂಲಕ ಸಾಗಿಸಲಾಗಿದೆ. ಈ ಹೃದಯ ವಿದ್ರಾವಕ ಘಟನೆ ನಾಯಂಡಳ್ಳಿ ಜಂಕ್ಷನ್ನಲ್ಲಿ ನಡೆದಿದೆ.
ಶಾರದಮ್ಮ (73) ಮೃತ ಮಹಿಳೆ. ಬೆಂಗಳೂರಿಗೆ ತಾಯಿಯನ್ನ ಕರೆದುಕೊಂಡು ಮಗ ಶಿವಕುಮಾರ್ ಬಂದಿದ್ದ. ಬೆಡ್ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದ. ನನ್ನ ತಾಯಿಯನ್ನ ಉಳಿಸಿಕೊಡಿ ಎಂದಿ ಅಂಗಲಾಚಿದ್ದ. ಕೊನೆಗೂ ಖಾಸಗಿ ಆಸ್ಪತ್ರೆಯೊಂದರಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಲು ದಾಖಲಿಸಿ ಪರೀಕ್ಷೆ ಮಾಡುವ ವೇಳೆ ಶಾರದಮ್ಮ ಉಸಿರು ಬಿಟ್ಟಿದ್ದಾರೆ.
ಆಂಬುಲೆನ್ಸ್ಗಾಗಿ ಪರದಾಡಿದರೂ ಸಿಗಲಿಲ್ಲ. ಅದಾದ ಬಳಿಕ ತಮ್ಮೂರಿಗೆ ಶವ ಕೊಂಡೊಯ್ಯಲು ಮಗ ಶಿವಕುಮಾರ್ 108 ಅಂಬ್ಯುಲೆನ್ಸ್ಗೆ ಕರೆ ಮಾಡಿದ್ದಾನೆ. ಆದರೆ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ, ಕೊನೆಗೆ ಆಟೋದಲ್ಲಿ ವೃದ್ಧ ತಾಯಿಯ ಶವವನ್ನು ಸಾಗಿಸಲು ಮುಂದಾಗಿದ್ದಾನೆ. ಮಾನವೀಯತೆ ಮೆರೆದ ಆಟೋ ಚಾಲಕ ಶಗ ಸಾಗಿಲು ಒಪ್ಪಿದರು.
ಕರೊನಾದಿಂದ ಶಾರದಮ್ಮ ಮೃತಪಟ್ಟಿದ್ದರೂ ಆಸ್ಪತ್ರೆಯವರು ಮೃತದೇಹಕ್ಕೆ ಪಿಪಿಇ ಕಿಟ್ ಅನ್ನೂ ಹಾಕದೆ ಶವ ಹಸ್ತಾಂತರಿಸಿದ್ದಾರೆ. ತಾಯಿ ಶವವನ್ನು ಆಟೋದಲ್ಲಿ ಮಲಗಿಸಲು ಸಾಧ್ಯವಾಗದೆ ಕೂರಿಸಿದ್ದಾರೆ. ಆಟೋದಲ್ಲಿ ಕುಲುಕಿ ಬೀಳದಂತೆ ಅಮ್ಮನ ತಲೆಯನ್ನು ಶಿವಕುಮಾರ್ ಎದೆಗೆ ಆನಿಸಿಕೊಂಡೇ ಪ್ರಯಾಣ ಬೆಳೆಸಿದ ದೃಶ್ಯ ಮನಕಲಕುವಂತಿತ್ತು.
ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ನಾಯಂಡಳ್ಳಿ ಜಂಕ್ಷನ್ ಬಳಿಕ ಆಟೋ ನಿಲ್ಲಿಸಿ ವಾಹನ ವ್ಯವಸ್ಥೆ ಮಾಡಿ ಕೊಟ್ಟು, ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದಬಂದಿದೆ.