ಲಸಿಕಾ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತು ಬೊಬ್ಬೆ ಹೊಡೆಯಬೇಡಿ: ಸಿಎಂ ಮನವಿ | ಜನತಾ ನ್ಯೂಸ್
ಬೆಂಗಳೂರು : ಲಸಿಕೆ ಹಾಕಿಸಿಕೊಳ್ಳಲು ರಾತೋರಾತ್ರಿ ಲಸಿಕಾ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತು ಬೊಬ್ಬೆ ಹೊಡೆಯಬೇಡಿ. ಧಾವಂತ, ಆತಂಕ ಬೇಡವೆಂದು ಜನರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಕ್ಸಿನ್ ಬಗ್ಗೆ ಸಮಸ್ಯೆ ಇಲ್ಲ. ಗೊಂದಲ ಬೇಡ, ಆತಂಕ ಬೇಡ ಎಂದು ಮನವಿ ಮಾಡಿಕೊಂಡರು. ರಾಜ್ಯಕ್ಕೆ ಲಸಿಕೆ ಪೂರೈಕೆ ಪ್ರಾರಂಭವಾಗಿದೆ. ಲಭ್ಯವಾದಷ್ಟು ಲಸಿಕೆ ಹಾಕಲು ಆರೋಗ್ಯ ಇಲಾಖೆ ಎಲ್ಲ ವ್ಯವಸ್ಥೆ ಮಾಡಿದ್ದು, ಅನಗತ್ಯವಾಗಿ ದಿಗಿಲು ಇಲ್ಲವೇ ಮುಗಿಬೀಳುವುದು ಬೇಡವೆಂದು ಸಲಹೆ ನೀಡಿದರು.
ವಾರ್ ರೂಮ್ ವೀಕ್ಷಣೆ ಮಾಡಿದ್ದೇನೆ. ದೇಶದಲ್ಲೇ ಈ ರೀತಿ ವಾರ್ ರೂಮ್ ಎಲ್ಲೂ ಇಲ್ಲ. ಕೆಲವರು ಹುಷಾರ್ ಆಗಿ ಇಪ್ಪತ್ತು ದಿನ ಆದ್ರೂ ಬೆಡ್ ಖಾಲಿ ಮಾಡಿಲ್ಲ. ಆ ರೀತಿ 503 ಜನ ಇದ್ದಾರೆ. ಹುಷಾರು ಆದವರು ಬೆಡ್ ಬಿಟ್ಟು ಇನ್ನೊಬ್ಬರಿಗೆ ಸಹಕಾರಿ ಆಗಬೇಕು. ಮನೆಗೆ ಹೋಗಿ ಎಂದು ವೈದ್ಯರು ಹೇಳಿದ್ರು ಕೆಲವರು ಹೋಗುವುದಿಲ್ಲ. ಹೀಗಾಗಿ ಈಗ ಸೂಚನೆ ನೀಡಿದ್ದೇವೆ ಎಂದರು.