ಈ ರಾಜ್ಯದ ವಿಷಬೀಜದ ಹೆಸರು ತೇಜಸ್ವಿ ಸೂರ್ಯ: ಡಿಕೆಶಿ ಕಿಡಿ | ಜನತಾ ನ್ಯೂಸ್
ಬೆಂಗಳೂರು : ತೇಜಸ್ವಿ ಸೂರ್ಯ ಅವರನ್ನು ವಿಷ ಬೀಜಕ್ಕೆ ಹೋಲಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.
ಬೆಡ್ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವನ ಬಗ್ಗೆ ಏನು ಹೇಳೋದು? ಅಧಿಕಾರಿ ಕೊಟ್ಟಿದ್ದ ಹೆಸರನ್ನು ಓದಿದ್ದೇನೆ ಎಂದು ಹೇಳಿದ್ದಾರೆ. ಅಧಿಕಾರಿ ಒಂದೇ ಸಮುದಾಯದ ಹೆಸರು ಕೊಡುತ್ತಾರಾ? ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅಧಿಕಾರಿ ಮೇಲೆ ಎತ್ತಿಹಾಕುತ್ತಿದ್ದಾರೆ ಎಂದು ಟೀಕಿಸಿದರು.
ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಕೊರೊನಾ ಮೂರನೇ ಅಲೆ ಎದುರಿಸಲು ತಯಾರಿ ಮಾಡಿಕೊಳ್ಳಿ ಅಂತ ಸಿಎಂ ಹೇಳಿದ್ದಾರೆ, ಮೊದಲು ಸಿಎಂ ಕೊರೊನಾ ಎರಡನೇ ಅಲೆಯನ್ನ ನಿಯಂತ್ರಿಸಲಿ, ಮೂರನೇ ಕೊರೊನಾ ಅಲೆಗೆ ತಯಾರಿ ಮಾಡೋಣ, ಆದ್ರೆ ಈಗ ಸಾಯುತ್ತಿರುವ ಜನರನ್ನ ಬದುಕಿಸಿ ಅಂತಾ ಕಿಡಿಕಾರಿದ್ದಾರೆ.
ವ್ಯಾಕ್ಸಿನೇಷನ್ಗೆ ನಾನು ಟ್ರೈ ಮಾಡ್ದೆ.. ಎಲ್ಲೂ ಸಿಕ್ತಿಲ್ಲ.. ಸಿಇಟಿ ಬೋರ್ಡ್ ಹಾಕಿದಂತೆ ವ್ಯಾಕ್ಸಿನೇಷನ್ಗೂ ಬೋರ್ಡ್ ಹಾಕಿ. ಇದರ ಜೊತೆಗೆ ಬೆಡ್, ಆಕ್ಸಿಜನ್ ಎಲ್ಲಿ ಸಿಗುತ್ತೆ ಅಂತ ಕೂಡ ಬೋರ್ಡ್ ಹಾಕಬೇಕು.. ಇದರಿಂದ ಜನರಿಗೆ ಅನುಕೂಲ ಆಗುತ್ತೆ.
ಶಿವಮೊಗ್ಗದಲ್ಲಿ ಒಬ್ಬ ಮಂತ್ರಿ (ಈಶ್ವರಪ್ಪ) ನಮ್ಮ ಬಳಿ ನೋಟ್ ಪ್ರಿಂಟಿಂಗ್ ಮಿಷನ್ ಇಲ್ಲ ಅಂತ ಹೇಳಿದ್ದಾರೆ. ಆದ್ರೆ ನೋಟ್ ಕೌಂಟಿಂಗ್ ಇಟ್ಕೊಂಡಿದಾರಲ್ಲ ನಮ್ ಮಂತ್ರಿಗಳು.. ಯಾಕ್ರೀ ಜನ್ರಿಗೆ ಹುಸಿ ನಂಬಿಕೆ ಹೇಳ್ತಿರಾ? ಕೊಡೋದಕ್ಕೆ ಆಗೋದಿಲ್ಲ ಅಂದ್ರೆ ಆಗೋದಿಲ್ಲ ಅಂತ ಹೇಳಿ. ಸರ್ಕಾರದ ಬಳಿ ದುಡ್ಡಿಲ್ಲ ಅಂತ ಹೇಳಿ. ಯಡಿಯೂರಪ್ಪನವರು ಸಾಲ ಮನ್ನಾ ಮಾಡೋದಕ್ಕೆ ನಮ್ ಹತ್ರ ಪ್ರಿಂಟಿಂಗ್ ಮಿಷನ್ ಇಲ್ಲ ಅಂತಾರೆ. ನೋವಿರೋದಕ್ಕೆ ತಾನೆ ಜನ ಕೇಳ್ತಿರೋದು..?
ರೈತರ ತರಕಾರಿ ಕೊಳ್ಳುವವರಿಲ್ಲ, ತೋಟಗಾರಿಕಾ ಸಚಿವರು, ಕೃಷಿ ಸಚಿವರು ರೈತರ ಹೊಲಗಳಿಗೆ ಭೇಟಿ ನೀಡಿದ್ದಾರಾ..? ಎಪಿಎಂಸಿ ಗಳಿಗೆ ಭೇಟಿ ನೀಡಿ ರೈತರ ಕಷ್ಟ ಅರಿತುಕೊಳ್ಳಲಿ. ಕಾರ್ಮಿಕರು, ಬೀದಿ ವ್ಯಾಪಾರಿಗಳು, ಬಡವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಬಡವರ ಅಕೌಂಟ್ ಗೆ 10 ಸಾವಿರ ಹಣ ಹಾಕಿ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ ಎಂದರು.