ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಕಟ್ಟುನಿಟ್ಟಿನ ನಿಯಮ, ಮದುವೆಯ ಹೊಸ ಅರ್ಜಿಗಳಿಗೆ ಅನುಮತಿಯಿಲ್ಲ: ಹೆಬ್ಬಾರ್ | ಜನತಾ ನ್ಯೂಸ್
ಉತ್ತರ ಕನ್ನಡ : ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕಿನ ನಿಯಂತ್ರಣದ ಸಲುವಾಗಿ ಮೇ 16ರ ಬೆಳಿಗ್ಗೆ 10ರಿಂದಲೇ ಕಟ್ಟುನಿಟ್ಟಿನ ಹಲವು ನಿಯಮಗಳು ಜಾರಿಯಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.
- ಜಿಲ್ಲೆಯಲ್ಲಿ ಮದುವೆ ಸಮಾರಂಭಗಳನ್ನು ಆಯೋಜಿಸಲು ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಅನುಮತಿ ನಿರಾಕರಿಸಲಾಗಿದೆ.
- ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 20ಕ್ಕಿಂತ ಹೆಚ್ಚು ಜನ ಸೇರಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
- ಈಗಾಗಲೇ ಅನುಮತಿ ನೀಡಲಾಗಿರುವ ಮದುವೆಗಳಲ್ಲಿ 40 ಜನರ ಬದಲು ಕೇವಲ 20 ಜನ ಭಾಗವಹಿಸಬಹುದು.
- ಮದುವೆಗೆ ಬಂದಿರುವ ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
- ಪ್ರಸ್ತುತ ಜಾರಿಯಲ್ಲಿರುವ ಕರ್ಫ್ಯೂ ಅವಧಿಯಲ್ಲಿ (ಬೆಳಿಗ್ಗೆ 10ರಿಂದ ಮರುದಿನ ಬೆಳಿಗ್ಗೆ 6) ಎಲ್ಲ ವಾಹನಗಳ ಸಂಚಾರವನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಖಾಸಗಿ ಮತ್ತು ಸರ್ಕಾರಿ, ಎರಡೂ ವಿಭಾಗಗಳ ವಾಹನಗಳನ್ನು ಈ ಆದೇಶ ಒಳಗೊಂಡಿದೆ.
- ವೈದ್ಯಕೀಯ ತುರ್ತು ಸೇವೆಗಳನ್ನು ಮತ್ತು ಅಧಿಕೃತ ಗುರುತಿನ ಚೀಟಿ ಹೊಂದಿರುವ ಸರ್ಕಾರಿ ನೌಕರರನ್ನು ಹೊರತು ಪಡಿಸಿ ಉಳಿದ ಎಲ್ಲರಿಗೂ ಇದು ಅನ್ವಯವಾಗುತ್ತದೆ
- ಗ್ರಾಮ ಪಂಚಾಯಿತಿಗಳು ಹಾಗೂ ನಗರ ಪ್ರದೇಶದ ಯಾವುದೇ ವಾರ್ಡ್ನಲ್ಲಿ 40ಕ್ಕಿಂತ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳಿದ್ದರೆ, ಅದನ್ನು ವಿಶೇಷ ಕಂಟೈನ್ಮೆಂಟ್ ಪ್ರದೇಶವೆಂದು ಗುರುತಿಸಬೇಕು.
ವಿಶೇಷ ಕಂಟೈನ್ಮೆಂಟ್ ವಲಯಗಳು
ತಾಲ್ಲೂಕು - ಗ್ರಾಮ ಪಂಚಾಯಿತಿಗಳು
ಕಾರವಾರ - ಚಿತ್ತಾಕುಲಾ, ಮಲ್ಲಾಪುರ
ಅಂಕೋಲಾ - ಬಬ್ರುವಾಡಾ, ಹಿಲ್ಲೂರು
ಹೊನ್ನಾವರ - ಕರ್ಕಿ
ಭಟ್ಕಳ - ಶಿರಾಲಿ
ಶಿರಸಿ - ಬನವಾಸಿ
ಸಿದ್ದಾಪುರ - ಅನಲೆಬೈಲ್, ಮನ್ಮಮೆ, ಕೋಲಶಿರ್ಸಿ
ಯಲ್ಲಾಪುರ - ಮಾವಿನಮನೆ, ಉಮ್ಮಚಗಿ, ನಂದೊಳ್ಳಿ
ಮುಂಡಗೋಡ - ಇಂದೂರು
ಜೊಯಿಡಾ - ರಾಮನಗರ, ಅಖೇತಿ
ದಾಂಡೇಲಿ - ಅಂಬಿಕಾನಗರ, ಅಂಬೇವಾಡಿ
ಹಳಿಯಾ - ಮುರ್ಕವಾಡ