ಬಿಜೆಪಿ ಸಂಸದ ನಿರ್ಮಿಸಿದ್ದ 808 ಹಾಸಿಗೆಗಳ ಕೋವಿಡ್ ಕೇರ್ ತೆರವಿಗೆ ಕೆಜ್ರಿವಾಲ್ ಸರ್ಕಾರ ಆದೇಶ - ಬಿಜೆಪಿ ಅಸಮಧಾನ | ಜನತಾ ನ್ಯೂಸ್
ನವದೆಹಲಿ : ಈಶಾನ್ಯ ದೆಹಲಿಯ ಲೋಕಸಭಾ ಸದಸ್ಯಹಾಗೂ ಬಿಜೆಪಿ ಮುಖಂಡ ಏರ್ಪಡಿಸಿರುವ 808 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರವುಗೊಳಿಸಲು ಕೆಜ್ರಿವಾಲ್ ನೇತ್ರತ್ವದ ಆಮ್ ಆದ್ಮಿ ಪಾರ್ಟಿ(ಎಎಪಿ) ಸರ್ಕಾರ ಆದೇಶಿಸಿದೆ, ಎಂದು ಬಿಜೆಪಿ ಶನಿವಾರ ಕಿಡಿಕಾರಿದೆ.
ಎರಡನೇ ತರಂಗ ಉತ್ತುಂಗಕ್ಕೇರಿದ್ದಾಗ, ಸಂಸದ ಮನೋಜ್ ತಿವಾರಿ ತಮ್ಮ ಕ್ಷೇತ್ರದಲ್ಲಿ 800ಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್ ಕೇರ್ ವ್ಯವಸ್ಥೆ ಮಾಡಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ಸರ್ಕಾರವು ರಾಜಕೀಯ ಜಿದ್ದಾಜಿದ್ದಿನಿಂದ ಅವುಗಳನ್ನು ತೆರವುಗೊಳಿಸಲಾಗಿದೆ, ಎಂದು ಬಿಜೆಪಿ ಟಿಕಿಸಿದೆ.
ಸಂಸದ ಮನೋಜ್ ತಿವಾರಿ 808 ಕೋವಿಡ್ ಹಾಸಿಗೆಗಳನ್ನು ಅವರ ಲೋಕಸಭೆ ಕ್ಷೇತ್ರದಲ್ಲಿ ಸ್ಥಾಪಿಸಲಾಗಿತ್ತು. ಆದರೆ ದೆಹಲಿ ಸರ್ಕಾರವು ಅವುಗಳನ್ನು ತೆರವುಗೊಳಿಸಿದೆ. ಸಿಎಂ ಕೇಜ್ರಿವಾಲ್ ಅವರು ಕೇವಲ ಒಂದು ಉದ್ದೇಶವನ್ನು ಹೊಂದಿದ್ದಾರೆ, ತಾವೂ ಕೆಲಸ ಮಾಡುವುದಿಲ್ಲ, ಬೇರೆಯವರಿಗೆ ಮಾಡಲು ಬಿಡುವುದಿಲ್ಲ. ದೆಹಲಿಯ ಸಾವುಗಳಿಗೆ ದೆಹಲಿ ಸರ್ಕಾರ ಸಂಪೂರ್ಣ ಹೊಣೆ, ಎಂದು ದೆಹಲಿ ಬಿಜೆಪಿ ಟ್ವೀಟ್ ಮಾಡಿದೆ.
ಕೋವಿಡ್ ಆಸ್ಪತ್ರೆಗೆ ವಿಸ್ತರಣೆಯಾಗಿ ಹೆಚ್ಚುವರಿ ಹಾಸಿಗೆಗಳನ್ನು ಸ್ಥಾಪಿಸಲಾಗಿದೆ ಎಂದು, ಏಪ್ರಿಲ್ 18ರ ಸರ್ಕಾರಿ ಆದೇಶವನ್ನು ಹಂಚಿಕೊಂಡ ಬಿಜೆಪಿ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಲ್ವಿಯಾ, ಈಶಾನ್ಯ ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ ಎರಡನೇ ತರಂಗವು ಉತ್ತುಂಗಕ್ಕೇರಿರುವ ಸಮಯದಲ್ಲಿ, ಅವರ ಕ್ಷೇತ್ರದಾದ್ಯಂತ 808 ಹಾಸಿಗೆಗಳ ಕೋವಿಡ್ಗೆ ವ್ಯವಸ್ಥೆ ಮಾಡಿದ್ದರು. ಅವು ಮೀಸಲಾದ ಆಸ್ಪತ್ರೆಯೊಂದಿಗೆ ಸಂಪರ್ಕ ಹೊಂದಿದ್ದವು. ಆದರೆ ಜಿದ್ದಾಜಿದ್ದಿನ ದೆಹಲಿ ಸರ್ಕಾರದ ಆದೇಶದ ಮೇರೆಗೆ ಅವುಗಳನ್ನು ತೆರವುಗೊಳಿಸಲಾಯಿತು. ಏಕೆ ಎಂದು ಕೇಜ್ರಿವಾಲ್ ವಿವರಿಸಬೇಕು. ಟ್ವೀಟ್ ಮಾಡಿದ್ದಾರೆ
ಈಶಾನ್ಯ ದೆಹಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಕುರಿತು ಬರೆದಿರುವ ಪತ್ರದಲ್ಲಿ, ದೆಹಲಿಯ ಎನ್ಸಿಟಿ ಸರ್ಕಾರದ ನಿರ್ದೇಶನದಂತೆ, ಹೆಚ್ಚುವರಿ ಹಾಸಿಗೆಗಳ ಸಾಮರ್ಥ್ಯವನ್ನು ಸೃಷ್ಟಿಸುವ ಸಲುವಾಗಿ ಕೋವಿಡ್ ಆಸ್ಪತ್ರೆಗೆ ವಿಸ್ತರಣೆಯಾಗಿ ಕೋವಿಡ್ ರೋಗಿಗಳಿಗೆ ಹೆಚ್ಚುವರಿ ಹಾಸಿಗೆಗಳನ್ನು ಸ್ಥಾಪಿಸಲು ನಮ್ಮ ಕಚೇರಿ ಈ ಕೆಳಗಿನ ಸೌಲಭ್ಯಗಳನ್ನು ಗುರುತಿಸಿದೆ, ಎಂದಿದೆ.
ಜಿಲ್ಲಾ ಈಶಾನ್ಯದಲ್ಲಿ ಯಾವುದೇ ಕೋವಿಡ್ ಆಸ್ಪತ್ರೆ ಇಲ್ಲ. ಆದಾಗ್ಯೂ, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ರೋಗಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ತುರ್ತು ಆಧಾರದ ಮೇಲೆ ಕೋವಿಡ್ ಆಸ್ಪತ್ರೆಯ ಸಂಪರ್ಕವನ್ನು ಹೊಂದಿರುವುದು ಕಡ್ಡಾಯವಾಗಿದೆ. ಆದ್ದರಿಂದ, ಗುರುತಿಸಲಾದ ಸೌಲಭ್ಯಗಳನ್ನು ನಿಮ್ಮ ಆಸ್ಪತ್ರೆಯೊಂದಿಗೆ ಜೋಡಿಸಲು ಉದ್ದೇಶಿಸಲಾಗಿದೆ, ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆದೇಶದಲ್ಲಿ, ಲೆ ಡೈಮಂಡ್ ಬ್ಯಾಂಕೆಟ್(100 ಹಾಸಿಗೆ), ಡಾ.ಸಂಪೂರ್ನಾನಂದ್ ಸರ್ವೋದಯ ಕನ್ಯಾ ವಿದ್ಯಾಲಯ(320 ಹಾಸಿಗೆಗಳು)ವನ್ನು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ. ಹಾಗೂ ಇತರ ಎರಡು ಸೌಲಭ್ಯಗಳು - ಸರ್ಕಾರಿ ಬಾಲಕಿಯರ ಹಿರಿಯ ಮಾಧ್ಯಮಿಕ ಶಾಲೆ(168 ಹಾಸಿಗೆಗಳು) ಮತ್ತು ಸರ್ಕಾರಿ ಬಾಲಕರ ಹಿರಿಯ ಮಾಧ್ಯಮಿಕ ಶಾಲೆ(220 ಹಾಸಿಗೆಗಳು)ಗಳನ್ನು ಜಿಟಿಬಿ ಆಸ್ಪತ್ರೆಗೆ ಸೇರಿಸಲು ಕೋರಲಾಗಿತ್ತು.