ಪತ್ನಿಗೆ ಕೋವಿಡ್ ವಿಷಯ ತಿಳಿದ ಪತಿಗೆ ಹೃದಯಾಘಾತ, ಸಾವಿನಲ್ಲೂ ಒಂದಾದ ದಂಪತಿ! | ಜನತಾ ನ್ಯೂಸ್
ಚಿಕ್ಕಮಗಳೂರು : ತನ್ನ ಹೆಂಡತಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪತಿ ಹೃದಯಾಘಾತದಿಂದ ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರು ನಗರದ ಅರವಿಂದನಗರದಲ್ಲಿ ನಡೆದಿದೆ.
ನಿವೃತ್ತ ಎಎಸ್ಐ ಬಸವರಾಜ್(68) ಅವರ ಪತ್ನಿ ಜಯಮ್ಮ(60)ಗೆ ಕರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿದ ಬಸವರಾಜ್ಗೆ ಹೃದಯಾಘಾತವಾಗಿತ್ತು. ದಂಪತಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕರೊನಾ ಸೋಂಕಿನಿಂದ ಪತ್ನಿ ಮೃತಪಟ್ಟರೆ, ಅತ್ತ ಹೃದಯಾಘಾತದಿಂದ ಪತಿ ಕೊನೆಯುಸಿರೆಳೆದರು.
RELATED TOPICS:
English summary :Chikkamagaluru