ಪ್ರೀತಿಪಾತ್ರರ ಎಷ್ಟು ಜನರ ಜೀವ ಬಲಿತೆಗೆದುಕೊಂಡು ಬಿಟ್ಟಿತು ಈ ಕೊರೋನಾ: ನೆನೆದು ಕಣ್ಣೀರಿಟ್ಟ ಪ್ರಧಾನಿ | ಜನತಾ ನ್ಯೂಸ್
ನವದೆಹಲಿ: : ಣ್ಣಿಗೆ ಕಾಣದ ಸೋಂಕಿಗೆ ಅದೆಷ್ಟು ಜನರ ಜೀವ ಕಳೆದುಕೊಂಡರು. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಕಂಗಾಲಾಗಿದ್ದಾರೆ. ನಮ್ಮ ಪ್ರೀತಿ ಪಾತ್ರ ಎಷ್ಟೋ ಜನರ ಜೀವವನ್ನು ಈ ಕೊರೋನಾ ಬಲಿತೆಗೆದುಕೊಂಡು ಬಿಟ್ಟಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಅಗಲಿದವರ ನೆನೆದು ಪ್ರಧಾನಿ ನರೇಂದ್ರ ಮೋದಿ ಅವರು ಭಾವಾನಾತ್ಮಕವಾದವರು.
ತಮ್ಮ ಕ್ಷೇತ್ರ ವಾರಾಣಾಸಿಯ ವೈದ್ಯರು, ನರ್ಸ್ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ಅವರು, ಇದೇ ವೇಳೆ ಸೋಂಕಿನ ವಿರುದ್ಧ ಹೋರಾಟದಲ್ಲಿ ಆರೋಗ್ಯ ಕ್ಷೇತ್ರದ ಮುಂಚೂಣಿ ಕಾರ್ಯಕರ್ತರ ಸೇವೆಯನ್ನು ಅಭಿನಂದಿಸಿದರು. ಇದೇ ವೇಳೆ ಸೋಂಕಿ ವಿರುದ್ಧದ ಈ ಹೋರಾಟ ನಿರಂತರವಾಗಿದ್ದು, ಈ ಬಗ್ಗೆ ತೃಪ್ತಿಹೊಂದಬಾರದು ಎಂದು ಕರೆ ನೀಡಿದರು.
ಸೋಂಕಿತರ ಚಿಕಿತ್ಸೆಗೆ ಸಾಕಷ್ಟು ಕೆಲಸಗಳು ನಡೆದಿದ್ದು, ಉತ್ತರ ಪ್ರದೇಶದ ಪೂರ್ವಾಂಚಲ್ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಹರಿಸು ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.ಇದೇ ವೇಳೆ ತಮ್ಮ ಕ್ಷೇತ್ರದ ಆಸ್ಪತ್ರೆಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಿದರು.
ಇದೇ ವೇಳೆ ಲಸಿಕೆ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ ಅವರು, ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯುವುದರಿಂದ ಜನ ಸೇವೆ ನಡೆಸಬಹುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ನೀಡುವ ಮೂಲಕ ಅವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಇನ್ನು ಬ್ಲಾಕ್ ಫಂಗಸ್ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕೋವಿಡ್ ಸೋಂಕಿನ ವಿರುದ್ಧ ಹೋರಾಟದಲ್ಲಿ ಬ್ಲಾಕ್ ಫಂಗಸ್ ಹೊಸ ಸವಾಲಾಗಿ ಪರಿಣಮಿಸಿದೆ. ಅದನ್ನು ಎದುರಿಸಲು ಮುನ್ನೆಚ್ಚರಿಕೆಯ ಸಿದ್ಧತೆಗಳನ್ನು ತೆಗೆದುಕೊಳ್ಳುವತ್ತ ಗಮನಹರಿಸಬೇಕು ಎಂದರು.
ಸಾಂಕ್ರಾಮಿಕ ಪರಿಣಾಮವು ತುಂಬಾ ವಿಸ್ತಾರವಾಗಿದೆ, ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಹಲವಾರು ಜೀವಗಳು ಕಳೆದುಹೋಗಿವೆ ಎಂದು ಪ್ರಧಾನಿ ಭಾವೋದ್ವೇಗದಿಂದ ಹೇಳಿದರು. " ಈ ವೈರಸ್ ನಮ್ಮಿಂದ ಅನೇಕ ಪ್ರೀತಿಪಾತ್ರರನ್ನು ಕಸಿದುಕೊಂಡಿದೆ. ನಾನು ಅವರಿಗೆ ನನ್ನ ವಿನಮ್ರ ಗೌರವವನ್ನು ಅರ್ಪಿಸುತ್ತೇನೆ ಮತ್ತು ಜನರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ " ಎಂದು ಅವರು ಹೇಳಿದರು.