ದರೋಡೆಗೆ ಸಂಚು ರೂಪಿಸುತ್ತಿದ್ದ ಗ್ಯಾಂಗ್ ಸಿಸಿಬಿ ವಶಕ್ಕೆ | ಜನತಾ ನ್ಯೂಸ್
ಬೆಂಗಳೂರು : ದರೋಡೆಗೆ ಸಂಚು ರೂಪಿಸುತ್ತಿದ್ದ ಕುಖ್ಯಾತ ರೌಡಿ ನಾಗನ ಸಹಚರರನ್ನ ರೆಡ್ ಹ್ಯಾಂಡ್ ಆಗಿ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜಾನ್ ವಿಲಿಯಂ ಅಲಿಯಾಸ್ ಅಪ್ಪು, ಶಶಿಧರ ಅಲಿಯಾಸ್ ಗುಂಡ, ಪಾರ್ತಿಬಲ್ ಬಿನ್ ಗೋಂವಿದರಾಜು ಹಾಗೂ ಮೈಕಲ್ ಜಾಕ್ಸನ್ ಬಂಧಿತರು.
ಶಾಂತಿನಗರದ ಬರ್ಲಿ ಸ್ಟ್ರೀಟ್ನ ಕ್ರಿಶ್ಚಿಯನ್ ಮಸಣದ ಬಳಿ, ಒಂಟಿಯಾಗಿ ಬರುವ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ನಗದು ಚಿನ್ನ ಆಭರಣಗಳನ್ನ ದೋಚಲು ಸಜ್ಜಾಗಿದ್ದ ಗ್ಯಾಂಗನ್ನ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ ಸಿಸಿಬಿ ಪೊಲೀಸರು ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡಿದ್ದಾರೆ.
English summary :Bangalore