ಕೋವಿಡ್ಗೆ ಗಂಡ ಬಲಿ, ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದ ಪತ್ನಿ ಹೃದಯಾಘಾತದಿಂದ ಸಾವು | ಜನತಾ ನ್ಯೂಸ್
ವಿಜಯನಗರ : ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ಪತಿ ಮೃತಪಟ್ಟರೆ, ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದ ಪತ್ನಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ.
ಗುತ್ತಿಗೆದಾರ ಪರಮೇಶ್ವರಪ್ಪ(65) ಮತ್ತು ವಾಮದೇವಮ್ಮ(60) ಮೃತರು. ಪರಮೇಶ್ವರಪ್ಪಗೆ ಕರೊನಾ ಸೋಂಕು ತಗುಲಿತ್ತು. ಬಳ್ಳಾರಿ ವಿಮ್ಸ್ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಸಂಜೆ ಪತಿಯ ಅಂತ್ಯಸಂಸ್ಕಾರ ಮುಗಿಸಿಕೊಂಡು ಪತ್ನಿ ವಾಮದೇವಮ್ಮ (60) ಮನೆಗೆ ಬಂದಿದ್ದಾರೆ. ಪತಿಯ ಸಾವಿನಿಂದ ನೊಂದಿದ್ದ ವಾಮದೇವಮ್ಮ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
English summary :Vijaypura