ನಾನಂತೂ ಓದಿಲ್ಲ, ನೀನಾದ್ರೂ ಓದು ಎಂದು ಹೆಂಡತಿಯನ್ನು ಕೆಎಎಸ್ ಓದಿಸಿ, ತಹಸೀಲ್ದಾರ್ ಮಾಡಿಸಿದ್ದ ಪತಿ ಕೊರೊನಾಗೆ ಬಲಿ | ಜನತಾ ನ್ಯೂಸ್
ಶಿವಮೊಗ್ಗ : ತಾನಂತೂ ಓದಿಲ್ಲ, ಪತ್ನಿಯನ್ನಾದರೂ ಓದಿಸಿ ದೊಡ್ಡ ಹುದ್ದೆಗೇರಿಸಬೇಕು ಎಂದು ಕನಸು ಕಂಡಿದ್ದ ವ್ಯಕ್ತಿ ಕೋವಿಡ್-19 ಸೋಂಕಿಗೆ ಬಲಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಕೋವಿಡ್ ನಿಂದ ಮೃತಪಟ್ಟವರು. ಇವರು ತನ್ನ ಅಕ್ಕನ ಮಗಳು ಅಶ್ವಿನಿ ಎಂಬವರನ್ನು ಮದುವೆಯಾಗಿದ್ದರು. ನಾನಂತೂ ಓದಿಲ್ಲ ಹಾಗಾಗಿ ಪತ್ನಿಯಾದರೂ ಓದಿ ಕೆಎಎಸ್ ಅಧಿಕಾರಿ ಆಗಲಿ ಎಂದು ಕನಸು ಕಂಡಿದ್ದರು.
ಅದರಂತೆ ಪತ್ನಿಗೆ ಕೆಎಎಸ್ ಪೂರ್ವಭಾವಿ ತರಬೇತಿ ಕೊಡಿಸಿದ್ದರು. ಸೀನಾ ಆಸೆಯಂತೆ ಪತ್ನಿ ಅಶ್ವಿನಿ ಕಳೆದ ವರ್ಷ ಕೆಎಎಸ್ ಪಾಸ್ ಮಾಡಿದ್ದರು. ಕಳೆದ 6 ತಿಂಗಳಿನಿಂದ ಬೆಂಗಳೂರಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಕಳೆದ ಒಂದು ವಾರದಿಂದ ಕೊರೊನಾದಿಂದಾಗಿ ಪತಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ನನ್ನ ಕೊರೋನಾ ಬಲಿ ತೆಗೆದುಕೊಂಡಿದೆ.