ಕೊರೊನಾ ಹೋಗಲಾಡಿಸಲು ಹೋಮ ಹವನ: ನಾಲ್ವರ ವಿರುದ್ಧ ಎಫ್ಐಆರ್ | ಜನತಾ ನ್ಯೂಸ್
ಬೆಳಗಾವಿ : ಕೋವಿಡ್ ಸೋಂಕಿನ ನಿರ್ಮೂಲನೆಗಾಗಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಹೋಮ, ಹವನ ಮಾಡಿದ್ದ ಆರೋಪದಡಿ ಬಿಜೆಪಿ ಮುಖಂಡರ ವಿರುದ್ಧ ಇಲ್ಲಿನ ಶಹಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಳಗಾವಿಯ ಗಿರೀಶ್ ದೊಂಗಡಿ, ಜಯಂತ್ ಜಾಧವ್, ಕಲ್ಲಪ್ಪ ಶಹಾಪುರಕರ್ ಹಾಗೂ ಸುನೀಲ್ ಮುತಗೇಕರ್ ಎಂಬವರ ವಿರುದ್ಧ ದೂರು ದಾಖಲಾಗಿದೆ.
ಮೇ 24 ರಂದು ಬೆಳಗಾವಿಯ ಬಸವನಗಲ್ಲಿಯಲ್ಲಿ ಹೋಮ ನಡೆಸಿದ ಹಿನ್ನೆಲೆ ಮಹಾನಗರ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕರು ದೂರು ನೀಡಿದ್ದರು. ಇದನ್ನ ಆಧರಿಸಿ ನಾಲ್ವರ ವಿರುದ್ಧ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
English summary :Belagavi