ಮೂರು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದವರು ನಾಲ್ಕನೇ ಬಾರಿಗೆ ಅಂದರ್.! | ಜನತಾ ನ್ಯೂಸ್
ಬೆಂಗಳೂರು : ಮೂರು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಕಳ್ಳರು, ನಾಲ್ಕನೇ ಬಾರಿಗೆ ಅಂದರ್ ಆಗಿದ್ದಾರೆ.
ಮೊಹಮ್ಮದ್ ಯೂಸುಫ್(19), ಮೊಹಮ್ಮದ್ ತೌಸಿಫ್(19), ಶ್ರೀನಿವಾಸ್(22) ಹಾಗೂ ಸೈಯ್ಯದ್ ಸಾಹೇಬ(22) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಮಾರುತಿ ಆಲ್ಟೊ ಕಾರು ಹಾಗೂ 2 ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ನಿರ್ಜನ ಪ್ರದೇಶದಲ್ಲಿ ಸಂಚರಿಸುತ್ತಿದ್ದವರಿಗೆ ಚಾಕು ಹಾಗೂ ಡ್ರ್ಯಾಗರ್ ತೋರಿಸಿ ಮೊಬೈಲ್, ಹಣ ಹಾಗೂ ಬೈಕ್ ಕಸಿಯುತ್ತಿದ್ದ ಕಳ್ಳರು, ಈ ಹಿಂದೆ ಒಂದು ಸುಲಿಗೆ ಹಾಗೂ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ, ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದರು.
ಮೇ 26 ರಂದು ಮಾರುತಿ 800 ಆಲ್ಟೊ ಕಾರಿನಲ್ಲಿ ಆರೋಪಿಗಳು ರಸ್ತೆಗಿಳಿದಿದ್ದರು. ಈ ವೇಳೆ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವುದನ್ನು ಕಂಡು ಸ್ಥಳದಿಂದ ಕಾರು ಬಿಟ್ಟು ಕಾಲ್ಕಿತ್ತಿದ್ದರು.ಇದರಿಂದ ಅನುಮಾನಗೊಂಡ ಪೊಲೀಸರು ಬೆನ್ನತ್ತಿ ಹಿಡಿದಾಗ ಆರೋಪಿಗಳ ಕೃತ್ಯ ಬಯಲಾಗಿದೆ.