ಮತ್ತೊಂದು ಗಂಡಾಂತರ ಕಾಯಿಲೆ ಬರಲಿದೆ, ನಡೆದುಕೊಂಡು ಹೋಗ್ತಿರುವಾಗಲೇ ಮನುಷ್ಯ ಬಿದ್ದು ಸಾಯ್ತಾನೆ: ಕೋಡಿಶ್ರೀ ಭವಿಷ್ಯ | ಜನತಾ ನ್ಯೂಸ್
ಹಾಸನ : ಹಾಸನದ ಅರಸೀಕೆರೆಯ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ಕೊರೊನಾದಂತಹ ಮಾರಣಾಂತಿಕ ಕಾಯಿಲೆ ದೂರವಾಗಲು ಸುಮಾರು 10 ವರ್ಷಗಳೇ ಬೇಕು. ಭೂಮಿಯಲ್ಲಿ ಈಗಾಗಲೇ ಕೋಟ್ಯಂತರ ಜನರ ಶವವನ್ನು ಹೂತಿದ್ದಾರೆ. ಅದೇ ವಿಷವಾಗಿ ಭೂಮಿಯಿಂದ ಹೊರಬರಲಿದೆ. ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಮುಂದೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಜೂನ್ 20ರ ಬಳಿಕ ಕೊರೊನಾ ಅಲೆ ಕಡಿಮೆಯಾಗಲಿದೆ ಕೊರೊನಾದ ಹಾವಳಿ ತಪ್ಪಲಿದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದು ಮುಂದೆ ಭಯಾನಕ ದಿನಗಳನ್ನು ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸದ್ಯ ಜೂನ್ 20ರ ಬಳಿಕ ಕೊರೊನಾ ಅಲೆ ಕಡಿಮೆಯಾಗಲಿದೆ. ಕೊರೊನಾ ಹೋಗುವುದಕ್ಕೆ ಇನ್ನೊಂದು ಅಲೆ ಬರಲಿದೆ, ಮತ್ತೊಂದು ಗಂಡಾಂತರ ಕಾಯಿಲೆ ಬರಲಿದೆ, ನಡೆದುಕೊಂಡು ಹೋಗ್ತಿರುವಾಗಲೇ ಮನುಷ್ಯ ಬಿದ್ದು ಸಾಯ್ತಾನೆ ಕುಂಭದಲ್ಲಿ ಗುರು ಬರಲು- ತುಂಬುವುದು ಕೆರೆ ಕಟ್ಟೆ, ಶಂಬುವಿನ ಪದ ಸಾಕ್ಷಿ ಡಂಬವೆನಬೇಡಿ. ಕಾರ್ತಿಕ ಮಾಸದವರೆಗೂ ಕೊರೊನಾ ಬೆನ್ನು ಹತ್ತಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
"ಕುಂಭದಿ ಗುರು ಬರಲು ತುಂಬುವವು ಕೆರೆ ಕಟ್ಟೆ, ಶಂಭುವಿನ ಪದಸಾಕ್ಷಿ ಡಂಬವೆನ್ನೆಲು ಬೇಡಿದೆನಾ ಎಂದರೆ, ಪ್ರಳಯದ ಮಳೆ ಆಗಲಿದೆ. ಮಿಂಚಿನಿಂದ ದುರ್ಯೋಗ ಇದೆ. ಜಗತ್ತಿನಲ್ಲಿ ಅಪಾಯಕಾರಿ ಘಟನೆಯೊಂದು ನಡೆಯಲಿದೆ. ಇದರ ಜೊತೆಗೆ ರಾಜಕೀಯ ಭೀತಿ ಎದುರಾಗಲಿದೆ. ಅಲ್ಲದೆ ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳಲಿವೆ” ಎಂದು ಹೇಳಿದ್ದಾರೆ.
ಭೂಮಿಯಲ್ಲಿ ಈಗಾಗಲೇ ಕೋಟ್ಯಂತರ ಜನರ ಶವವನ್ನು ಹೂತಿದ್ದಾರೆ. ಅದೇ ವಿಷವಾಗಿ ಭೂಮಿಯಿಂದ ಹೊರಬರಲಿದೆ. ಇನ್ನೂ ಬೆಚ್ಚಿ ಬೀಳಿಸುವ ವಿಷಯವೆಂದರೆ ಸತ್ತು ಹೂತವರು ಮೇಲೆದ್ದು ಮಾತನಾಡುತ್ತಾರೆ ಎಂದು ಶ್ರೀಗಳು ತಿಳಿಸಿದ್ದಾರೆ.