ಗಂಗಾವತಿಯ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಹೇರ್ಕಟ್; ಕ್ಷೌರಿಕನಿಗೆ ವೈದ್ಯರಿಂದ ಸನ್ಮಾನ | ಜನತಾ ನ್ಯೂಸ್
ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿಯ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಕ್ಷೌರಿಕರೊಬ್ಬರು ಧೈರ್ಯದಿಂದ ಹೋಗಿ ಕ್ಷೌರ ಮಾಡಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದು ತಲೆ ಕೂದಲುಗಳು ಬೆಳೆದಿವೆ. ಆರೋಗ್ಯದ ದೃಷ್ಟಿಯಿಂದ ಕ್ಷೌರ ಮಾಡುವ ಹಾಗೂ ಶೇವಿಂಗ್ ಮಾಡುವ ಅನಿವಾರ್ಯತೆ ಇತ್ತು. ಈ ಮಧ್ಯೆ ಧೈರ್ಯ ಮಾಡಿ ಜಿಲ್ಲೆಯ ಕ್ಷೌರಿಕ ಸುರೇಶ್ ಎಂಬಾತ ಆಸ್ಪತ್ರೆಯಲ್ಲಿರುವ ಎಲ್ಲಾ ಪುರುಷರಿಗೆ ಕ್ಷೌರ ಮತ್ತು ಶೇವಿಂಗ್ ಮಾಡಿದ್ದಾರೆ.
ಸುರಕ್ಷತೆಯಿಂದ ದೃಷ್ಟಿಯಿಂದ ಪಿಪಿಇಕಿಟ್ ಧರಿಸಿ ಭಯಗೊಳ್ಳದೇ ರೋಗಿಗಳಿಗೆ ಕ್ಷೌರ ಮಾಡಿದ್ದಾರೆ. ಜಿಲ್ಲೆಯ ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 30 ಜನ ಸೋಂಕಿತರು ಹೇರ್ಕಟ್ ಮಾಡಿಸಿಕೊಂಡಿದ್ದಾರೆ.
ಕಟಿಂಗ್ ಮಾಡಿದ ಸುರೇಶ್ ಅವರಿಗೆ ವೈದ್ಯರು ಸನ್ಮಾನ ಮಾಡಿದರು. ಸ್ಥಳೀಯ ಭುವನೇಶ್ವರಿ ಸಂಘದವರು 2000 ರೂ. ಗೌರವ ಧನ ನೀಡಿದರು.